People reject over the top action like #KDTheDevil.
They don't support subtle action like #MangoPachcha either.
And films like #Blink, #Murphy and #Teertharoopa that tried something different also struggled to get audiences.
So, what exactly do Kannada audiences want to watch?
ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲ ಇದು.
ಸೈಕಲ್ನಲ್ಲೇ ಪ್ರಪಂಚ ಸುತ್ತಿ 'ಅಮೆರಿಕ' ಸೇ��ಿದ ಬೆಂಗಳೂರಿನ ಪಡ್ಡೆ ಹುಡುಗರ ರೋಚಕ ಕಥೆ ಇದು!
2020 ಜನವರಿ 1ಕ್ಕೆ ಸರಿಯಾಗಿ 40 ವರ್ಷಗಳ ಹಿಂದಿನ ಕಥೆ ಇದು. ಊರಿಂದೂರಿಗೆ ನಡೆದೇ ಹೋಗುವ ಕಾಲವದು. ಕಾರು ಬಸ್ಸುಗಳಿರಲಿ ಸೈಕಲ್ಗಳೂ ಅಪರೂಪವೇ. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಮೂವರು ಉತ್ಸಾಹಿ ಯುವಕರು ಊಹೆಗೂ ನಿಲುಕದ ಸಂಕಲ್ಪ ಮಾಡಿದ್ದರು. ಜೇಬಲ್ಲಿ ಕೇವಲ 45 ರೂಪಾಯಿ ಇಟ್ಟುಕೊಂಡು ಸೈಕಲ್ನಲ್ಲೇ ಅಮೆರಿಕ ಸೇರಿಕೊಂಡ ರೋಚಕ ಸಾಹಸಗಾಥೆ ಇದು. ಗುರು (ಗುರುಪ್ರಸಾದ್), ಪುರುಷೋತ್ತಮ ಮತ್ತು ಪ್ರಸಾದ್ (ಗುರು, ಪುರು ಮತ್ತು ಪ್ರಸಾದ್) ಈ ಮೂವರೂ ಬಾಲ್ಯ ಸ್ನೇಹಿತರು. ಮೂರೂ ಜನ ಬೆಂಗಳೂರಿನವರೇ. ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರು ವಿದ್ಯಾಭ್ಯಾಸ ಪೂರ್ಣಗೊಳಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಾರೆ. ಹಲ���ು ದಿನಗಳವರೆಗೆ ಒಳ್ಳೆಯ ಕೆಲಸಕ್ಕಾಗಿ ಹುಡುಕಾಟ ನಡೆಸಿದರೂ ಇವರಿಗೆ ಇಷ್ಟವಾಗುವ ಕೆಲಸ ದೊರೆಯಲಿಲ್ಲ. ಆದರೆ, ಈ ಸಾಹಸಿ ಯುವಕರಿಗೆ ಏನಾದರೂ ಸಾಧಿಸಬೇಕು ಎಂಬ ಛಲವಿತ್ತು. ಈ ಛಲವೇ ಇವರನ್ನು ಅಮೆರಿಕ ಸೇರುವಂತೆ ಮಾಡಿತ್ತು. ಈ ಕುರಿತ ಸಾಹಸಮಯ ಕಥೆ ಇಲ್ಲಿದೆ.
ಕೆಲಸವಿಲ್ಲದೆ ಅಲೆಯುತ್ತಿದ್ದ ಈ ಮೂವರೂ ಯುವಕರು ಸುಮ್ಮನಂತೂ ಕುಳಿತುಕೊಳ್ಳುತ್ತಿರಲಿಲ್ಲ. ಅಲ್ಲಿ ಇಲ್ಲಿ ಟ್ರಕ್ಕ��ಂಗ್, ಪಿಕ್ನಿಕ್ ಎಂದು ಪ್ರವಾಸ ಮಾಡುತ್ತಲೇ ಇದ್ದರು. ಒಮ್ಮೆ ಬೆಂಗಳೂರಿನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಶಿವಗಂಗೆ ಬೆಟ್ಟಕ್ಕೆ ಹೋಗುತ್ತಾರೆ. ಬೆಟ್ಟ ಹತ್ತಿ ದಣಿವಾಗಿ ಕೂತಾಗ ಇವರಲ್ಲಿ ಒಂದು ಮಹತ್ವದ ಆಲೋಚನೆ ಹುಟ್ಟುತ್ತದೆ. ಅದೆಂದರೆ, ಇಡೀ ವಿಶ್ವವನ್ನೇ ಸುತ್ತು ಹಾಕಬೇಕು ಎಂಬ ಮಹದಾಸೆ ಮೂಡುತ್ತದೆ. ಆದರೆ ಇವರ ಬಳಿ ಹಣವಿರಲಿಲ್ಲ. ಅದಕ್ಕೆ ಇವರು ಕಂಡುಕೊಂಡ ಉಪಾಯವೆಂದರೆ, ಸೈಕಲ್ನಲ್ಲಿಯೇ ವಿಶ್ವವನ್ನು ಸುತ್ತುಹಾಕಬೇಕು ಎಂದು ತೀರ್ಮಾನಿಸುತ್ತಾರೆ.
ಶಿವಗಂಗ���ಯ ಬೆಟ್ಟದ ಮೇಲೆ ಬಂದ ಆಲೋಚನೆಯನ್ನು ಅಲ್ಲಿಗೇ ಬಿಡದೆ ಕಾರ್ಯಪ್ರವೃತ್ತರಾಗುತ್ತಾರೆ. ಸುಮಾರು 8 ತಿಂಗಳು ಗಂಭೀರವಾಗಿ ಯೋಚಿಸಿ, ಒಂದು ವೇಳೆ ವಿಶ್ವ ಪರ್ಯಟನೆ ಕೈಗೊಂಡರೆ ಎದುರಾಗಬಹುದಾದ ಸವಾಲುಗಳು ಹಾಗೂ ವಿವಿಧ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಕೊನೆಗೂ 1979 ರ ಡಿಸೆಂಬರ್ನಲ್ಲಿ ತೀರ್ಮಾನಕ್ಕೆ ಬರುತ್ತಾರೆ. ಆ ತೀರ್ಮಾನ, ಅದರ ಅನುಷ್ಠಾನ ಒಂದು ರೋಮಾಂಚಕಾರಿ ಕಥನ. 1980ರ ಜನವರಿ 1 ರಂದು ತಮ್ಮ ಸೈಕಲ್ಗಳನ್ನು ಏರಿಯೇ ಬಿಟ್ಟ��ು. ಅವರು ಹೊರಡಲು ಉದ್ದೇಶಿಸಿದ್ದಾದರೂ ಎಲ್ಲಿಗೆ? ಇಡೀ ವಿಶ್ವವನ್ನು ಸುತ್ತಲು. ಅಂದು ಅವರ ಕೈಗೊಂಡ ಈ ದಿಟ್ಟ ನಿರ್ಧಾರ ಅನ್ಯರಿಗೆ ಹುಚ್ಚು ಸಾಹಸ ಎನಿಸಿರಬಹುದು. ಮಲ್ಲೇಶ್ವರದ ಈ ಮೂವರು ಯುವಕರು ಯೋಜಿಸಿದ್ದು, ಸೈಕಲ್ ಮೇಲೆ ವಿಶ್ವಪರ್ಯಟನೆಯ ಪರಿಕ್ರಮ. ಅವರ ಮನೆಯವರಿಗೇ ಇವರ ಸಾಹಸದ ಬಗ್ಗೆ ನಂಬಿಕೆ ಇರಲಿಲ್ಲ. ಹೊರಟವರು ಬೇಗ ವಾಪಸ್ಸು ಬಂದು ಬಿಡುತ್ತಾರೆ ಈ ಹುಂಬರು ಎಂದು ಉಪೇಕ್ಷಿಸಿದ್ದರಂತೆ.
ಈ ಮೂರು ಯುವಕರು 1980ರ ಹೊಸ ವರ್ಷ ದಿನದಂದು ಮುಂಜಾನೆಯೇ ಎದ್ದು ಬೆಂಗಳೂರಿನ ಮಲ್���ೇಶ್ವರಂನಲ್ಲಿರುವ ಕೋದಂಡರಾಮಸ್ವಾಮಿ ದೇವಾಲಯಕ್ಕೆ ಹೋಗಿ ನಮನ ಸಲ್ಲಿಸುತ್ತಾರೆ. ಇವರಿಗೆ ನಾವು ಅಜ್ಞಾತವಾಸಕ್ಕೋ, ವನವಾಸಕ್ಕೋ ಹೊರಟಿದ್ದೇವೆ ಎಂಬ ಭಾಸವಾಗುತ್ತಿತ್ತಂತೆ. ವಿಧಾನಸೌಧದ ಮುಂದೆ ಹೋಗಿ ಆ ಶಕ್ತಿ ಕೇಂದ್ರಕ್ಕೆ ತಮ್ಮ ಗೌರವ ಸಲ್ಲಿಸಿ ಬೆಂಗಳೂರು ಬಿಟ್ಟು ಸಿದ್ದಗಂಗೆ ಕಡೆ ಹೊರಟರು. ಅಲ್ಲಿ ಶಿವೈಕ್ಯರಾಗಿರುವ ಶ್ರೀ ಶಿವಕುಮಾರ ಸ್ವಾಮಿಜಿ ಅವರ ಆಶೀರ್ವಾದ ಪಡೆದರು. ಅಲ್ಲಿಂದ ಆರಂಭವಾದದ್ದು, ಅವರ ಅಸೀಮ ಪಯಣ. ಅವರ ದೃಷ್ಟಿ ನೆಟ್ಟದ್ದು ಅಗಮ್ಯ ದಿಗಂತದೆಡೆಗೆ. ಮತ್ತೆ ಅವರೆಂದೂ ತಮ್ಮ ಪ್ರಯಾಣದಲ್ಲಿ ಹಿಂದಡಿಯಿಡಲಿಲ್ಲ. ಇಡೀ ವಿಶ್ವವನ್ನೇ ಸುತ್ತಿಕೊಂಡು ಬಂದು ಬಿಡೋಣ ಎಂಬ ಆದಮ್ಯ ವಿಶ್ವಾಸದೊಂದಿಗೆ ಮೂವರೂ ತಮ್ಮ ಸೈಕಲ್ಲುಗಳನ್ನೇರಿ ಹೊರಟೇ ಬಿಟ್ಟರು. ಹಿಂದೆ ತಿರುಗಿ ನೋಡುವ ಪ್ರಸಂಗವೂ ಅವರಿಗೆ ಎದುರಾಗಲೇ ಇಲ್ಲ. ಅಂದ ಹಾಗೆ ಭೂಮಿ ಸುತ್ತುವ ಪರ್ಯಟನೆಗೆ ಹೊರಟ ಆ ಮೂವರ ಕಿಸೆಯಲ್ಲಿ ಅಂದು ಇದ್ದದ್ದು ಕೇವಲ 45 ರುಪಾಯಿ ಮಾತ್ರ.
ಹೀಗೆ ತಮ್ಮ ಸಾಹಸಮಯ ಪ್ರಯಾಣ ಆರಂಭಿಸಿದ ಈ ವಿಶ್ವಪರ್ಯಟಕರು ಮೊದಲು ಭಾರತಾದ್ಯಂತ ಪ್ರವಾಸ ಮಾಡುತ್ತಾರೆ. ಸ���ಮಾರು 11 ದಿನಗಳ ನಿರಂತರ ಸೈಕಲ್ ಪ್ರಯಾಣದ ನಂತರ ಅವರು ತಲುಪಿದ್ದು ಮುಂಬೈ ಎಂಬ ಮಹಾನಗರಿ. ಅಲ್ಲಿಂದ ಮುಂದೆ, ಏನು ಹೇಗೆ ಮೂವರಿಗೂ ಗೊತ್ತಿಲ್ಲ. ಹಡಗಿನಲ್ಲಿ ಸೈಕಲ್ ಹಾಕಿಕೊಂಡು ಪ್ರಯಾಣ ಮುಂದುವರೆಸಲು ಅಗತ್ಯವಿದ್ದ ಹಣವೂ ಅವರಲ್ಲಿ ಇರಲಿಲ್ಲ. ಮುಂದೇನು ಮಾಡುವುದು ಎಂದು ಯೋಚಿಸುತ್ತ ಆ ಕಾಲಕ್ಕೆ ದೇಶದ ಸುಪ್ರಸಿದ್ದ ಕ್ರಿಕೆಟ್ ಆಟಗಾರರಾಗಿದ್ದ ವಿಜಯ್ ಮರ್ಚೆಂಟ್ ಅವರನ್ನು ಭೇಟಿ ಮಾಡುವ ಅವಕಾಶ ಗಿಟ್ಟಿಸಿಕೊಂಡು, ಅವರನ್ನು ಭೇಟಿಯಾಗುತ್ತಾರೆ. ತಮ್ಮ ಬಗ್ಗೆ, ತಮ್ಮ ಆಸೆ, ಉದ್ದ��ಶಗಳ ಬಗ್ಗೆ, ಅಲ್ಲಿಯವರೆಗಿನ ಯಾತ್ರೆಯ ಬಗ್ಗೆ, ಎಲ್ಲವನ್ನೂ ಅವರ ಮುಂದೆ ಹರವಿದರು. ಈ ಯುವಕರ ಸ್ಥೈರ್ಯಕ್ಕೆ ಮೆಚ್ಚಿ ಸಂತಸಗೊಂಡ ವಿಜಯ್ ಮರ್ಚೆಂಟ್ ಅವರು ಹಡಗು ಪ್ರಯಾಣದ ಅರ್ಧವೆಚ್ಚವನ್ನು ತಾವು ಭರಿಸುವುದಾಗಿ ಭರವಸೆ ನೀಡಿ ಬೆನ್ನು ತಟ್ಟುತ್ತಾರೆ. ಅರ್ಧ ವೆಚ್ಚಕ್ಕೇನೂ ಹಣ ಹೊಂದಿಕೆಯಾಯಿತು. ಇನ್ನರ್ಧ ವೆಚ್ಚಕ್ಕೆ ಏನು ಮಾಡುವುದು ಎಂಬ ಯೋಚನೆ ಉಂಟಾಯಿತು. ಈ ಮೂವರೂ ಟಾಟಾ ಚಾರೀಟೀಸ್ ಸಂಸ್ಥೆಗೆ ಹೋಗಿ ಅರ್ಜಿ ಸಲ್ಲಿಸಿದರು. ಇವರ ಸಾಮರ್ಥ್ಯದ ಬಗ್ಗೆ ವಿಶ್ವಾಸ ಬಂದ ಸಂಸ್ಥೆಯವರು ಇನ್ನರ್ಧ ಹಣ ಕೊಟ್ಟೇಬಿಟ್ಟರು. ಸರಿ ಹಣ ಹೊಂದಿಸಿದ್ದಾಯಿತು. ಮುಂದೆ ಎದುರಾದದ್ದು ವೀಸಾ ಪ್ರಶ್ನೆ. ಮೊದಲಿಗೆ ಅರಬ್ ದೇಶಕ್ಕೆ ತೆರಳೋಣ ಎಂದು ನಿರ್ಧರಿಸಿ, ಯು.ಎ.ಇ ಕಚೇರಿಗೆ ಹೋಗಿ ವೀಸಾಗೆ ಬೇಡಿಕೆಯಿಟ್ಟರು. ಇವರ ಅದೃಷ್ಟಕ್ಕೆ ಅಲ್ಲಿದ್ದ ಅಧಿಕಾರಿ ಪುಟ್ಟಪರ್ತಿಯ ಸಾಯಿಬಾಬಾ ಅವರ ಭಕ್ತನಂತೆ. ಇವರು ವೈಟ್ಫೀಲ್ಡ್ ಇರುವ ಬೆಂಗಳೂರಿನವರೆಂದು ಗೊತ್ತಾಗಿ ಯಾವುದೇ ಕಷ್ಟ ನೀಡದೇ ವೀಸಾ ದಯಪಾಲಿಸಿದ. ಆಗ ಶುರುವಾಯ್ತು ವಿಶ್ವ ಪರ್ಯಟನೆಯ ಎರಡನೇ ಮಜಲು.
ಹಡಗು ಹತ್ತಿದ ಈ ಧೀರರು, ಪ್ರಯಾಣ ಮುಂದುವರೆದಷ್ಟು ದಿನವೂ ಅಲ್ಲಿಯೇ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಒಂದಷ್ಟು ಹ��� ಸಂಪಾದಿಸಿದರು. ತಮ್ಮ ಮುಂದಿನ ಯೋಜ��ೆಗಳಿಗೆ ಪೂರಕವಾಗುವಂತೆ ಒಂದಷ್ಟು ಹಣವನ್ನು ಕೂಡಿಟ್ಟುಕೊಂಡರು. ಆ ವಾಸ್ಕೋಡಗಾಮ, ಕೊಲಂಬಸ್ ದೇಶಗಳನ್ನು ಹುಡುಕಲು ಅನ್ವೇಷಣೆ ಮಾಡಲು ಹೊರಟ ಎಂಬ ಸಂಗತಿಯನ್ನು ನಾವು ಚರಿತ್ರೆಯಿಂದ ಓದಿ ಕಲಿತಿದ್ದೇವೆ. ಅದೇ ರೀತಿ ಈ ನಮ್ಮ ಗೆಳೆಯರು ಅರಸಿ ಹೋದ ಜಾಗಗಳು, ದೇಶಗಳ ಪಟ್ಟಿ ನೋಡಿದರೆ ಇವರುಗಳು ವಾಸ್ಕೋಡಗಾಮನಿಗಿಂತ ಏನೂ ಕಡಿಮೆ ಇಲ್ಲವೇನೋ ಎಂದೆನಿಸಿದರೆ ಆಶ್ಚರ್ಯವಿಲ್ಲ. ಸುಮಾರು ಮೂರು ವರ್ಷಗಳ ಕಾಲಾವಧಿಯಲ್ಲಿ ಅವರು ಪ್ರವೇಶ ಮಾಡಿದ ಖಂಡಗಳು, ದೇಶಗಳ ಹೆಸರುಗಳು ಒಂದೇ, ಎರಡೇ... ಮ���್ಯ ಪ್ರಾಚ್ಯ, ಟರ್ಕಿ, ಬಲ್ಗೇರಿಯಾ, ರುಮೇನಿಯಾ, ಯುಗಾಸ್ಲಾವಿಯಾ, ಗ್ರೀಕ್, ಈಜಿಪ್ಟ್, ಆಪ್ರಿಕಾ, ದಕ್ಷಿಣ ಅಮೆರಿಕದ ಅರ್ಜೈಂಟೀನಾ, ಬ್ರೆಜಿಲ್, ಚಿಲಿ, ಸೆಂಟ್ರಲ್ ಅಮೇರಿಕಾ, ಟ್ರಿನಿಡಾಡ್, ಟೋಬ್ಯಾಗೋ, ಕೆನಡಾ, ಅಮೆರಿಕ... ಅವರು ಸುತ್ತದ ದೇಶಗಳಿಲ್ಲ, ನಿತ್ಯ ಜೀವನಕ್ಕೆ ಎಡತಾಕದ ಕೆಲಸಗಳಿಲ್ಲ. ಮನೆಗಳಿಗೆ ಬಣ್ಣ ಹಚ್ಚುವುದು, ಹಂದಿ ಫಾರ್ಮ್ಗಳಲ್ಲಿ ಕೂಲಿ ಕೆಲಸ, ಕುರಿ ಮೇಯಿಸುವುದು, ಕಾರು ��ೊಳೆಯುವುದು, ಯಾವುದೋ ಸಣ್ಣ ಕಚೇರಿಗಳಲ್ಲಿ ಗುಮಾಸ್ತ ಕೆಲಸ ಮಾಡುವುದು, ಯಾರದೋ ತೋಟಗಳಲ್ಲಿ ನೀರುಣಿಸುವುದು,,,, ಹೀಗೆ ಯಾವುದಾದರೂ ಸರಿಯೇ ಎಂಬಂತೆ ಕೆಲಸ ಮಾಡಿ ಹಣ ಸಂಪಾದಿಸುವ ಮಾರ್ಗ ಕಂಡುಕೊಂಡರು.
ಇಡೀ ಭಾರತದಲ್ಲಿ ಸಂಚರಿಸುವಾಗ ತಮ್ಮಿಂದ ಒಂದೇ ಒಂದು ಪೈಸೆ ಖರ್ಚಾಗಲಿಲ್ಲ ಎಂಬುದು ಅವರಿಗೆ ಸಂತಸದ ನೆನಪು. ಡಾಬಾಗಳಲ್ಲಿ, ದೇವಸ್ಥಾನಗಳಲ್ಲಿ, ಅನೇಕ ದಾನಿಗಳು ಇವರ ಉದ್ದೇಶವನ್ನು ಅರಿತು, ಇವರ ಸಾಹಸ ಗಾಥೆಯನ್ನು ಕೇಳಿ ಊಟ-ವಸತಿ ವ್ಯವಸ್ಥೆ ಮಾಡಿ ಕೊಟ್ಟಿದ್ದರು. ಒಮ್ಮೆ ಒಂದು ���ಾತ್ರಿ ಎಲ್ಲಿ ತಂಗುವುದು ಎಂಬ ಸಮಸ್ಯೆ ಉಂಟಾಯಿತು. ಆಗ ಅಲ್ಲಿಗೆ ಬಂದ ವ್ಯಕ್ತಿ ಇವರನ್ನು ಕರ್ನಾಟಕದಿಂದ ಹೊರಟ ಪ್ರವಾಸಿಗರು ಎಂದು ತಿಳಿದ ತಕ್ಷಣ ಕೇಳಿದ ಮೊದಲ ಪ್ರಶ್ನೆ ಜನರಲ್ ಕಾರ್ಯಪ್ಪ ಗೊತ್ತಾ ಎಂದು. ಇವರು ಗೊತ್ತು ಎಂದ ಮೇಲೆ ತಾನು ಅವರಿಗೆ ವಾಹನ ಚಾಲಕನಾಗಿ ಕೆಲಸ ಮಾಡಿದ್ದೆ ಎಂದು ಹೆಮ್ಮೆಯಿಂದ ಸ್ಮರಿಸಿಕೊಂಡು ಅವರಿಗೆ ಊಟೋಪಚಾರ ಮಾಡಿದರಂತೆ.
*ರಾಜಾಸ್ಥಾನದ ಪಂಚತಾರಾ ಹೋಟೆಲ್ನಲ್ಲಿ ಉಪಚಾರ*
ರಾಜಸ್ಥಾನದಲ್ಲಿದ್ದಾಗ ಒಂದು ಐಷಾರಾಮಿ ಕಾರಿನಲ್ಲಿ ಬಂದ ಶ್ರೀಮಂತ ���್ಯಕ್ತಿಯೊಬ್ಬರು ಇವರ ಕಥೆಯನ್ನು ಆಲಿಸಿ ಒಂದು ವಿಸಿಟಿಂಗ್ ಕಾರ್ಡ್ ನೀಡಿ ಜೈಪುರಕ್ಕೆ ಬಂದಾಗ ಆ ಹೋಟೆಲ್ನಲ್ಲಿ ಉಳಿದುಕೊಳ್ಳಬೇಕೆಂದು ಒತ್ತಾಯಿಸಿದರು. ಜೈಪುರದ ಆ ಹೋಟೆಲ್ ಪಂಚತಾರ ಸೌಲಭ್ಯವುಳ್ಳದಾಗಿತ್ತು. ಎಲ್ಲಾ ರೀತಿಯ ಸೌಕರ್ಯಗಳನ್ನು ಇವರಿಗೆ ಒದಗಿಸಲಾಯಿತು. ಆಗ ಅವರಿಗೆ ತಿಳಿದು ಬಂದಿದ್ದು ಆ ವಿಸಿಟಿಂಗ್ ಕಾರ್ಡ್ ಕೊಟ್ಟ ವ್ಯಕ್ತಿ ನಮ್ಮ ರಾಜ್ಯದ ಈ ಹಿಂದೆ ರಾಜ್ಯಪಾಲರಾಗಿದ್ದ ಮೋಹನ್ಲಾಲ್ ಸುಖಾಡಿಯಾ ಅವರ ಮಗ ಎಂದು. ತಮ್ಮ ಕುಟುಂಬಕ್ಕೆ ಕರ್ನಾಟಕ ರಾಜ್ಯ ಎಷ್ಟೊಂದು ಸುಖ ಸಂತೋಷ ಕೊಟ್ಟಿದೆ. ಆ ಋಣವನ���ನು ಈ ರೀತಿ ತೀರಿಸಲಿಕ್ಕೆ ಪ್ರಯತ್ನಿಸುತ್ತಿದ್ದೇನೆ ಎಂದಿದ್ದರಂತೆ ಅವರು.
ಇಂತಹ ಒಳ್ಳೆಯ ಘಟನೆಗಳ ಜೊತೆಗೆ ಕೆಟ್ಟ ಘಟನೆಗಳು ಅವರಿಗೆ ಅನುಭವ ಆಗಿರುವುದುಂಟು. ಮಧ್ಯ ಪ್ರದೇಶದ ಬಳಿ ಇವರು ನಿರ್ಜನ ರಸ್ತೆಯಲ್ಲಿ ನಡುರಾತ್ರಿ ಸೈಕಲ್ಗಳಲ್ಲಿ ಹೋಗುತ್ತಿದ್ದಾಗ ಪೊಲೀಸರು ಇವರ ಬಗ್ಗೆ ಗುಮಾನಿ ಹೊಂದಿ, ಕತ್ತಲ ಕೋಣೆಯೊಂದರಲ್ಲಿ ಕೂಡಿಹಾಕಿ, ರಾತ್ರಿ ಇಲ್ಲೇ ಇರಬೇಕು ಎಂದು ಹೇಳಿ ಬಿಟ್ಟರು. ಅಲ್ಲಿ ವಿದ್ಯುತ್ ಇರಲಿಲ್ಲ. ಇದ್ದದ್ದು ಕೇವಲ ಮಲ, ಮೂತ್ರದ ದುರ್ವಾಸನೆ. ಬೆಳಗ್ಗೆ ಎದ್ದ ಮೇಲೆ ತಿಳಿಯಿತು, ತಮ್ಮನ್ನು ರಾತ್ರಿ ಇಟ್ಟಿದ್ದು ಒಂದು ಪೋಲಿಸ್ ಠಾಣೆಯ ಲಾಕಪ್ ರೀತಿಯ ಒಂದು ಜಾಗದಲ್ಲಿ ಎಂದು. ಪೊಲೀಸರಿಂದ ��ಚ್ಚರಿಕೆ ಪಡೆದು ಅವರು ಮುನ್ನಡೆದರು. ಲಕ್ನೋದಲ್ಲಿ ಅಲ್ಲಿನ ಉಪ ವಿಭಾಗೀಯ ಅಧಿಕಾರಿಗಳ ಬಳಿ ಅಂದು ರಾತ್ರಿ ಮಲಗಲು ಜಾಗದ ಸಹಾಯ ಕೇಳಲು ಹೋದಾಗ ಈ ಮೂವರನ್ನು ಕೆಲಸಕ್ಕೆ ಬಾರದ ಸೋಮಾರಿಗಳೆಂದು ಜರೆದು ತಮ್ಮ ಕಣ್ಣೆದುರಿಗೆ ಒಂದು ಕ್ಷಣವೂ ಇರಬಾರದೆಂದು ಅರಚಿ ತನ್ನ ಕಚೇರಿಯಿಂದ ಹೊರದಬ್ಬಿದ್ದರು.
ಇರಾನ್ನಲ್ಲಿ ಹೋಗುತ್ತಿದ್ದಾಗ ಈ ಮೂವರನ್ನು ಗೂಡಾಚಾರಿಗಳೆಂದು ಬಗೆದು 10 ದಿನಗಳ ಕಾಲ ಜೈಲಿಗೆ ಹಾಕಲಾಗಿತ್ತು. ರುಮೇನಿಯಾದಲ್ಲಿ ಸೈಕಲ್ಗಳನ್ನು ಕಳೆದುಕೊಂಡಾಗ ಹೆಚ್ಚು ದುಃಖ��ಾಯಿತಂತೆ.
1983 ನವೆಂಬರ್ನಲ್ಲಿ ಅಂದರೆ, ಒಂದು ರೀತಿಯಿಂದ ಭಾರತ ಬಿಟ್ಟು ಮೂರು ವರ್ಷಗಳ ನಂತರ ಅವರು ಅಮೆರಿಕದ ಬೃಹತ್ ನಗರವಾದ ನ್ಯೂಯಾರ್ಕ್ ಸೇರಿದರು. ಅಲ್ಲಿ ಯಾವ ರೀತಿ ಕೆಲಸ ಮಾಡಬೇಕೆಂದು ಯೋಚಿಸುತ್ತಿರುವಾಗ ಅಂದು ಹೆಚ್ಚು ಪ್ರಚಲಿತವಾದ ಕ್ಯಾಸೆಟ್ಗಳನ್ನು ಮಾರುವ ಯೋಚನೆಗೆ ಬಂದರು. ಅಂಗಡಿಯೊಂದರಲ್ಲಿ ಕಡಿಮೆ ದರಕ್ಕೆ ಕ್ಯಾಸೆಟ್ಗಳನ್ನು ಕೊಂಡು ರೈಲ್ವೆ ಸ್ಟೇಷನ್ ಬಳಿ ಸ್ವಲ್ಪ ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಹಣ ಸಂಪಾದಿಸಿದರು. ಹೀಗೆ ಅನಧಿಕೃತವಾಗಿ ಯಾವುದೇ ಪರವಾನಗಿ ಇಲ್ಲದೇ ಮಾರಾಟ ಮಾಡುವಾಗ ಪೊಲೀಸರ ಕೈಯಲ್ಲಿ ಎರಡು ಬಾರಿ ಸಿಕ್ಕಿಬಿದ್ದರು. ಹೀಗೆ ಮಾರಾಟ ಮಾಡುವಾಗ ಕಮಲ ದಿಂಡೋರ ಎಂಬ ವ್ಯಕ್ತಿ ��ರಿಚಯವಾಗಿ (ಇವರು ದಿವಂಗತ ರಾಜೀವ್ ಗಾಂಧಿ ಜೊತೆ ವಿಮಾನ ಚಾಲಕರಾಗಿ ಕೆಲಸ ಮಾಡಿದವರು) ಈ ಮೂವರು ಸ್ನೇಹಿತರ ಪರಿಶ್ರಮ ನಡವಳಿಕೆ ಕಂಡು ವಿಶ್ವಾಸ ಬಂದ ನಂತರ ಕಮಲ ದಿಂಡೋರಾ ತನ್ನ ಸ್ವಂತ ಉದ್ಯಮದಲ್ಲಿಯೇ ಈ ಮೂವರಿಗೂ ನೌಕರಿ ಕೊಟ್ಟರು. ಅಂದಿನ ಕಾಲದಲ್ಲಿ ವಾರಕ್ಕೆ 150 ಡಾಲರ್ ಸಂಬಳ ನೀಡುತ್ತಿದ್ದರು. ತನ್ನ ಉದ್ಯಮ ಬೃಹತ್ತಾಗಿ ಬೆಳೆದು ವರ್ಷಕ್ಕೆ 10-12 ಮಿಲಿಯನ್ ಡಾಲರ್ಗಳಷ್ಟು ವ್ಯವಹಾರ ಹೆಚ್ಚಾದಾಗ ಈ ಸಾಧನೆಯಲ್ಲಿ ಈ ಮೂವರ ಅಪಾರ ಪರಿಶ್ರಮ ಸೇರಿದೆ ಎಂದು ಅರಿತ ಕಮಲ್ ದಿಂಡೋರ ಈ ಮೂವರಿಗೆ ಗ್ರೀನ್ ಕಾರ್ಡ್ ಕೊಡಿಸಿದ್ದು ಅಲ್ಲದೇ ನ್ಯೂಯಾರ್ಕ್ನಲ್ಲೇ ಶಾಶ್ವತವಾಗಿ ನೆಲೆಸಲು ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟರು.
ಅಂದು ಕೆಚ್ಚಿನ ಪಡ್ಡೆ ಹುಡುಗರಾಗಿದ್ದ ಈ ಮೂವರೂ, ಇಂದು ಅಮೆರಿಕದ ನ್ಯೂಯಾರ್ಕ್ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಗುರು ಪ್ರಸಾದ್ ಈಗ ನ್ಯೂಯಾರ್ಕ್ ಭಾರತೀಯರ, ಅದರಲ್ಲಿಯೂ ವಿಶೇಷವಾಗಿ ಕನ್ನಡಿಗರ ಆಪದ್ಭಾಂದವರಾಗಿ ಬೆಳೆದಿದ್ದಾರೆ. ನ್ಯೂಯಾರ್ಕ್ ಕನ್ನಡ ಕೂಟದ ಬೆಳವಣಿಗೆಯಲ್ಲಿ ಗುರುಪ್ರಸಾದ್ ಪ್ರಮುಖ ಪಾತ್ರವಹಿಸಿದ್ದಾರೆ. ನಮ್ಮಿಂದ ಯಾರೇ ಕನ್ನಡಿಗರು ಹೋದರೂ ಅವರಿಗೆ ತಮ್ಮಿಂದಾಗುವ ಸಹಾಯ ಮಾಡಲು ಒಬ್ಬ ನಿಜವಾದ ಬಂಧು, ಗುರುವಿನ ರೂಪದಲ್ಲಿ ನ್ಯೂಯಾರ್ಕ್ನಲ್ಲಿ ಇದ್ದಾರೆ ಎಂಬುದು ಅವರ ಆ��ಿಥ್ಯದ ಸವಿಯಿಂದ ಎಲ್ಲರ ಅನುಭವ. ನ್ಯೂಯಾರ್ಕ್ನಲ್ಲಿ ಕನ್ನಡ ಭವನವನ್ನು ನಿರ್ಮಿಸಲೇಬೇಕೆಂಬ ಮುಂದಿನ ಗುರಿ ಹೊಂದಿರುವ ಗುರುಪ್ರಸಾದ್ ಕನ್ನಡ ಸಮುದಾಯದ ಆಶಾದೀಪ. ಯಾವುದೋ ಹುಂಬ ವಿಶ್ವಾಸದ ಮೇಲೆ ಸೈಕಲ್ ಹತ್ತಿ ಗೋಳ ಸುತ್ತಲು ಹೊರಟ ಆ ಯುವಕರು, ಅವರ ಸಾಹಸ, ಅವರ ಜೀವನ ಪ್ರೇಮ, ಆತ್ಮಸ್ಥೈರ್ಯಗಳಿಂದ ನಮ್ಮೆಲ್ಲ ಯುವಕರಿಗೆ ಪ್ರೇರಣೆ, ದಾರಿದೀಪವಾಗಿದ್ದಾರೆ. ಅವರ ಯಶೋಗಾಥೆ ಹೀಗೇ ಮುಂದುವರೆಯಲಿ ಎನ್ನುವುದು ನಮ್ಮೆಲ್ಲರ ಹಾರೈಕೆ. ಗುರುಪ್ರಸಾದ್ ಅವರನ್ನು [email protected] ಮೂಲಕ ಸಂಪರ್ಕಿಸಬಹುದು.
ಬರಹ ಮತ್ತು ಚಿತ್ರಗಳು : ವಿಜಯ ಕರ್ನಾಟಕ
You may like/dislike his methods, but #Guruprasad is an original showman (ರಂಗನಾಯಕ). And that he is, because he is a thinker.
This is a punches-filled paisa-vasool interview, simply watch...🙂
I had fun and it's evident in the conversation.😁
https://t.co/zAwqQybPIM
For those commenting on the cook wiping his brow in the Mysore Pak clip, try working a boiling hot kadai with 6 litres of ghee, 6 litres of molten sugar for an hour, stirring all the while!
#SaptaSagaradaacheEllo 🌊 is A-STONE-COLD-MASTERPIECE 🔥
In a cinematic landscape where profound romantic tales are seldom seen, SSE emerges as a beacon, reminiscent of the last memorable offering, 'Inthi Ninna Preethiya' in 2008. After a hiatus of one and a half decades, SSE not only rekindles the essence of a captivating love story but also excels in both narrative and technical prowess.
Back in 2016, when I first saw the film "Ricky," I wasn't convinced by Rakshit's crying scenes – a sentiment that persisted in "GBSM." Rakshit struggled to handle emotional scenes, but notable improvement was evident in the "Kirik Party." Fast forward to SSE, Rakshit has truly excelled in managing emotional scenes. Rakshit communicates through his eyes, portraying a myriad of emotions, and his crying scenes feel remarkably natural.
Rukmini Vasanth is the golden discovery of KFI, she's just a two film old (not counting Side A,) and she is a true artiste who skillfully stays true to the roles she portrays. It's hard to envision anyone else stepping into her shoes for the character of Priya. I have much more to share about her character, but to avoid spoilers, I'm refraining from discussing it now. I'll definitely delve into her scenes in more detail at a later time.
Chaitra J Achar has been on my radar since her role in Mahira, and she continued to impress in Aa Drushya. However, it was in Gilky that her performance truly stood out. With a remarkable blend of talent, dedication, and versatility, Chaitra J Achar is undoubtedly a rising star. Her proficiency in both acting and singing sets her apart as a unique and valuable asset, and her star is poised to ascend even higher in the years ahead. As evidenced by her stellar performances in Toby and Side B, she's undoubtedly here to stay.
Hemanth Rao, an incredible director, has left an indelible mark with his exceptional films. "GBSM" and "Kavaludaari" were outstanding, but "Sapta Sagaradaache Ello" stands out as something extraordinary. His growth as a storyteller is evident in every frame. No wonder he does so much re-work; he is a perfectionist who serves the audience the best meal.
Advaitha Gurumurthy, I was fortunate to watch "Uppina Kagada" at the film festival, and from that to SSE Advaita as a cinematographer has left a memorable impression with his outstanding skills. His collaboration with Hemanth is an added bonus – two men who truly know their craft.
Besides the amazing performances, the true heroes of "Sapta Sagaradaache Ello" are Advaita and Charan Raj.
I could continue praising Charan Raj endlessly. "Sapta Sagaradaache Ello" might be a simple story, but it's the remarkable performances and Charan's music, combined with other technical brilliance, that truly make the film stand out. Particularly in side B, it's a pure Charan Raj showcase.
This isn't a comprehensive review; there's much more to say about the film. For now, I'll savor and cherish the magical moments. Stay tuned for a detailed review coming soon.
Sapta Sagaradaache Ello in Cinemas Near you from Today
At the #Rajyotsava award ceremony in #Bengaluru, I was next to Shri Javarappa who has delivered newspapers for 57 YEARS!
He came up from #Mysuru for the ceremony only after delivering the morning papers. And headed back the same night to not miss the next day’s deliveries!
🙏🏼