ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಕಾವಲ್ ಭೈರಸಂದ್ರ ವಾರ್ಡ್ ನ ಮತಗಟ್ಟೆ ಸಂಖ್ಯೆ 28ರಲ್ಲಿ ಮತ ಚಲಾಯಿಸಲಾಯಿತು. ಈ ಸಂಧರ್ಭದಲ್ಲಿ ಕುಟುಂಬದ ಸದಸ್ಯರು, ಬೆಂಬಲಿಗರು ಉಪಸ್ಥಿತರಿದ್ದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿಂದು ಬಿಜೆಪಿ ಅಭ್ಯರ್ಥಿ ಕು. ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ನಡೆದ ಚುನಾವಣಾ ರೋಡ್ ಷೋ ಚಿತ್ರಣ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ ರೋಡ್ ಷೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಕೆ. ಅಣ್ಣಾಮಲೈ ಅವರಿಗೆ ಹೃತ್ಫೂರ್ವಕ ಸುಸ್ವಾಗತ.
ದೇಶಕ್ಕೆ ಸದೃಢ ಸರ್ಕಾರ & ಸಮರ್ಥ ನಾಯಕತ್ವ ನೀಡಿರುವ ಭಾರತೀಯ ಜನತಾ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರೀಯ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರೂ ಆಗಿರುವ ಶ್ರೀ ಯಡಿಯೂರಪ್ಪನವರು ಬರಮಾಡಿಕೊಂಡು ಶುಭಹಾರೈಸಿದರು. ಈ ಸಂಧರ್ಭದಲ್ಲಿ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ನನ್ನ ಬಂಧುಗಳು,
ಸಹಸ್ರಾರು ಬೆಂಬಲಿಗರು ಬಿಜೆಪಿ ಸೇರ್ಪಡೆಯಾದರು.
ಬಹುಜನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ನಮ್ಮ ಮಾರ್ಗದರ್ಶಕರು ಆದ ಬೆಹನ್ ಜೀ ಕುಮಾರಿ @Mayawati ಅವರೊಂದಿಗೆ ಇಂದು ನಗರದ ಅರಮನೆ ಮೈದಾನದಲ್ಲಿರುವ ತ್ರಿಪುರ ವಾಸಿನಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಾಯಿತು. ಬೆಹನ್ ಜೀ ಕು. ಮಾಯಾವತಿಯವರ ಮಾರ್ಗದರ್ಶನ ಹಾಗೂ ಭರವಸೆಯ ಮಾತುಗಳಿಂದ ಭೀಮ ಬಲ ಬಂದಂತಾಗಿದೆ.
#akhandasrinivasamurthy #PULIKESHINAGAR
ನಮ್ಮ ಬಹುಜನ ಸಮಾಜ ಪಕ್ಷದ ನಾಯಕಿ, ಬೆಹೆನ್ ಜೀ ಮಾಯಾವತಿ ಅವರು ಇಂದು ನನ್ನ ಪರ ಪ್ರಚಾರಕ್ಕೆ ಆಗಮಿಸುತ್ತಿರುವ ಬಗ್ಗೆ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ
A News Report published in Prajavani daily that our Bahujan Samaj Party leader, Behen ji @Mayawati is coming for campaign today at Tripura Vasini palace grounds
#akhandasrinivasamurthy #PULIKESHINAGAR
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಹೃದಯವಂತ ಕಾರ್ಯಕರ್ತ ಮಿತ್ರರು, ಹಿರಿಯ ಮುಖಂಡರು ಹಾಗೂ ನನ್ನ ಪಾಲಿಗೆ ಭೀಮಬಲದಂತಿರುವ ಮಹಾಜನತೆಯ ಜತೆಗೂಡಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಾಯಿತು. ಕಳೆದ ಬಾರಿಯಂತೆಯೇ ಈ ಬಾರಿಯೂ ನನ್ನ ಮಹಾಜನತೆ ದಾಖಲೆಯ ಮತಗಳೊಂದಿಗೆ ಪುಲಿಕೇಶಿನಗರವನ್ನು ಗೆಲ್ಲಿಸುವುದು ಖಚಿತ. ಇಂದು ನಿರೀಕ್ಷೆಗೂ ಮೀರಿ ಆಗಮಿಸಿ ಬೆಂಬಲಿಸಿದ ಈ ಜನಸ್ತೋಮವೇ ಗೆಲುವಿಗೆ ಮುನ್ನುಡಿ. ಇಂತಹ ಹೃದಯವಂತರ ಪ್ರೀತಿ ಪಡೆದಿರುವ ನಾನೇ ಧನ್ಯ. ಧನ್ಯೋಸ್ಮಿ.
#akandasrinivasamurthy
#PULIKESHINAGAR
#KarnatakaElection
#election2023
#TeamASM
#nomination
ಸಹೃದಯಿ ಆತ್ಮೀಯರೇ
2023ರ ರಾಜ್ಯ ವಿಧಾನಸಭಾ ಚುನಾವಣೆಗೆ ನಮ್ಮ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದು ಪುಲಿಕೇಶಿನಗರದ ಹಿರಿಯ ಮುಖಂಡರು, ಕಾರ್ಯಕರ್ತರು, ಕ್ಷೇತ್ರದ ಸಮಸ್ತ ಸಾರ್ವಜನಿಕರು ಹಾಗೂ ನಮ್ಮೆಲ್ಲ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಶೀರ್ವದಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆ
"ನೀವು ಬನ್ನಿ
ನಿಮ್ಮವರನ್ನೂ ಕರೆ ತನ್ನಿ"
ದಿನಾಂಕ
19 ಏಪ್ರಿಲ್ 2023
ಬುಧವಾರ
ಮೆರವಣಿಗೆ ಹೊರಡುವ ಸ್ಥಳ :
ಪೆರಿಯಾರ್ ಸರ್ಕಲ್
ಬೆಳಗ್ಗೆ 10 ಗಂಟೆಗೆ
ನಾಮಪತ್ರ ಸಲ್ಲಿಸುವ ಸ್ಥಳ :
ಚುನಾವಣಾಧಿಕಾರಿಗಳ ಕಚೇರಿ
ರಾಬರ್ಟ್ ಸನ್ ರಸ್ತೆ
ಫ್ರೆಜರ್ ಟೌನ್
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರ
#akandasrinivasamurthy #PULIKESHINAGAR
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಸಂಜೆ ಹಿರಿಯ ನಾಯಕರು ಸ್ಥಳೀಯ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು ಹಾಗೂ ಕ್ಷೇತ್ರದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಯಿತು.
In the wake of the Pulikeshinagar Assembly Constituency elections had discussions with senior leaders, local leaders, supporters, workers and the public of the constituency
#AkandaSrinivasaMurthy
#Pulikeshinagar
#TeamASM
#TeamAkanda
#Election2023
#KarnatakaElection
ರಾಜ್ಯ ವಿಧಾನಸಭಾ ಚುನಾವಣೆಗೆ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಕ್ಷೇತ್ರದ ಹಿರಿಯ ಮುಖಂಡರು, ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಬೆಂಬಲ ಸೂಚಿಸಿದರು.
#akandasrinivasamurthy#PULIKESHINAGAR#KarnatakaElection#election2023
#nomination
#TeamASM
ಶಿರಸಿಯಲ್ಲಿಂದು ವಿಧಾನಸಭೆ ಸಭಾಧ್ಯಕ್ಷರನ್ನು ಭೇಟಿಯಾಗಿ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ.
Today I met the Speaker of the Legislative Assembly in Shirsi and submitted my resignation as a member of the Legislative Assembly.
#akandasrinivasamurthy#PULIKESHINAGAR
ಮಹಾನ್ ಮಾನವತಾವಾದಿ, ಸಮ ಸಮಾಜ ಹಾಗೂ ಸಮಾನತೆಯ ಪ್ರತಿಪಾದಕ, ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಹಿನ್ನೆಲೆಯಲ್ಲಿ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಪೆರಿಯಾರ್ ಸರ್ಕಲ್ ನಲ್ಲಿರುವ ಬಾಬಾ ಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
#AmbedkarJayanti2023
ನನ್ನ ನೆಚ್ಚಿನ ನಾಯಕ, ಭಾರತದ ಸಂವಿಧಾನ ಶಿಲ್ಪಿ, ಮಹಾನ್ ಸಮಾಜ ಸುಧಾರಕ, ಶಿಕ್ಷಣ, ಸಂಘಟನೆ, ಹೋರಾಟಗಳೆಂಬ ಮೂಲಮಂತ್ರಗಳನ್ನು ಬೋಧಿಸಿದ ಭಾರತ ಭಾಗ್ಯ ವಿದಾತ ಶ್ರೀ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತಿದ್ದೇನೆ
#DrBRAmbedkar
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ನಾಗರಿಕರ ಜೊತೆ ನನ್ನ ನಿವಾಸದಲ್ಲಿಂದು ಜನತಾ ದರ್ಶನ ನಡೆಸಿ ಅವರ ಕುಂದುಕೊರತೆಗಳ ಆಲಿಸಿ ಪರಿಹಾರ ಸೂಚಿಸಲಾಯಿತು.
Glimpses of janatha Darshana at my residence at Pulikeshinagar assembly constituency.
#akandasrinivasamurthy#pulikesginagarmla#Pulikeshinagar
#MattommeSeenanna
#JanathaDarshana
#ಅಖಂಡಶ್ರೀನಿವಾಸಮೂರ್ತಿ
#ಪುಲಿಕೇಶಿನಗರ
#ಅಖಂಡ
#ಶ್ರೀನಿವಾಸಮೂರ್ತಿ
#ಜನತಾದರ್ಶನ