25-10-21ರಂದು ಶಿವಮೊಗ್ಗ(ಗ್ರಾ)ಠಾಣೆಯಲ್ಲಿ ದಾಖಲಾದ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ಪ್ರಕರಣದ ಆರೋಪಿ ಬಚ್ಚಾ@ಜಮೀರ್ 29 ವರ್ಷ ಟಿಪ್ಪುನಗರ ಶಿವಮೊಗ್ಗ&ಆತನ ಇಬ್ಬರು ಸಹಚರರನ್ನು ದಸ್ತಗಿರಿ ಮಾಡಿ 3ಮೊಬೈಲ್, 3ಡಾಂಗಲ್&1ಕಾರನ್ನು ವಶಪಡಿಸಿಕೊಂಡಿದ್ದು, ಬಚ್ಚಾನ ವಿರುದ್ಧ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 53 ಪ್ರಕರಣಗಳು ದಾಖಲಾಗಿರುತ್ತವೆ.
ದಿ:26-09-21ರಂದು ಮಾಳೂರು ಠಾಣಾ ವ್ಯಾಪ್ತಿಯ ಹಣಗೆರೆ ಗ್ರಾಮದ ವಾಸಿಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂದಿಸಿದ ಒಟ್ಟು ಐದು ಜನ ಆರೋಪಿಗಳನ್ನು ದಿ:26-11-21 ರಂದು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 8,17,000/- ರೂಗಳ 200 ಗ್ರಾಂ ಬಂಗಾರದ & 40 ಗ್ರಾಂ ಬೆಳ್ಳಿಯ ಆಭರಣಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ದಿ1-12-21ರಂದು ತುಂಗಾನಗರ ಠಾಣಾ ವ್ಯಾಪ್ತಿ ಪುಟ್ಟಪ್ಪನ ಕ್ಯಾಂಪ್ ನ ಲೇಔಟ್ ನಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ 4 ಜನರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 45,000 ರೂಗಳ 1ಕೆಜಿ 550ಗ್ರಾಂ ತೂಕದ ಒಣ ಗಾಂಜಾ&ಕೃತ್ಯಕ್ಕೆ ಉಪಯೋಗಿಸಿದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ
ದಿನಾಂಕ 06-12-2021 ರಂದು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ SRNM ಕಾಲೇಜಿನ ವಿದ್ಯಾರ್ಥಿಗಳಿಗೆ POCSO ಕಾಯ್ದೆ & ಮಾದಕ ವಸ್ತುಗಳ ಕುರಿತಂತೆ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.