ಫ್ರೀಡಂ ಹಬ್ಬ’ ಆಚರಣೆಯ ಯೋಜನೆ ಮತ್ತು ಸಮನ್ವಯತೆಗೆ ಸಂಬಂಧಿಸಿದಂತೆ ವಿಕಾಸ ಸೌಧದಲ್ಲಿ ಮಾನ್ಯ ಬಿ.ಡಿ.ಎ. ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
ಈ ಆಚರಣೆಯು ಯಶಸ್ವಿಯಾಗಿ ನೆರವೇರಲು ಅಗತ್ಯವಿರುವ ಪರಿಣಾಮಕಾರಿ ಇಲಾಖಾ ಸಮನ್ವಯತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಗಮನಹರಿಸಲಾಯಿತು. ಅಲ್ಲದೆ, ಕಾರ್ಯಕ್ರಮವು ಸುರಕ್ಷಿತ ಹಾಗೂ ಸುಸೂತ್ರವಾಗಿ ನಡೆಯಲು ಸಂಚಾರ ನಿರ್ವಹಣೆ, ಸಾರ್ವಜನಿಕ ಅಭಯ-ಸುರಕ್ಷತೆ, ಭದ್ರತಾ ವ್ಯವಸ್ಥೆಗಳು, ಸುಗಮ ಸಂಚಾರ ಯೋಜನೆ ಮತ್ತು ಇತರ ಪ್ರಮುಖ ಸರಕು-ಸಾಗಣೆ (ಲಾಜಿಸ್ಟಿಕ್ಸ್) ಕ್ರಮಗಳ ಕುರಿತು ಚರ್ಚಿಸಲಾಯಿತು.
Attended a meeting chaired by Hon'ble BDA Minister Shri Krishna Byre Gowda at Vikas Soudha regarding the planning and coordination for Freedom Habba.
The meeting focused on ensuring effective inter-departmental coordination for the successful conduct of the celebrations. Discussions covered traffic management, public safety, security arrangements, mobility planning, and other key logistical measures to facilitate a safe and seamless event.
#BengaluruTrafficPolice #FreedomHabba #PublicSafety #RoadSafety #NammaBengaluru
@Jointcptraffic@krishnabgowda
ನಮ್ಮ ನಿರಂತರ ಸಿಟಿ ರೌಂಡ್ಸ್ ಭಾಗವಾಗಿ, ಜಂಟಿ ಪೊಲೀಸ್ ಆಯುಕ್ತರು (ಸಂಚಾರ) ಮತ್ತು ಸಂಚಾರ ವಿಭಾಗದ ಡಿಸಿಪಿ (ಪೂರ್ವ) ಅವರೊಂದಿಗೆ ಫ್ರೇಜರ್ ಟೌ��್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೈನ್ಸ್ ವೃತ್ತಕ್ಕೆ (Haines Circle) ಭೇಟಿ ನೀಡಿದೆವು. ಈ ಸಂದರ್ಭದಲ್ಲಿ ಪ್ರಸ್ತುತ ಇರುವ ಸಂಚಾರ ವ್ಯವಸ್ಥೆಯನ್ನು ಪರಿಶೀಲಿಸಿ, ಜಂಕ್ಷನ್ನಲ್ಲಿ ಎದುರಾಗುತ್ತಿರುವ ಕಾರ್ಯಾಚರಣೆಯ ಸವಾಲುಗಳನ್ನು ಮೌಲ್ಯಮಾಪನ ಮಾಡಿದೆವು. ಅಲ್ಲದೆ, ಸಂಚಾರ ನಿರ್ವಹಣೆಯನ್ನು ಸುಧಾರಿಸಲು, ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಎಲ್ಲಾ ಪ್ರಯಾಣಿಕರ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದೆವು.
Visited Haines Circle today, under the jurisdiction of Frazer Town Traffic Police Station, along with the Joint Commissioner of Police (Traffic) and DCP Traffic (East) as part of our ongoing city rounds. We reviewed the existing traffic conditions, assessed operational challenges at the junction, and discussed measures to improve traffic management, ease congestion, and enhance road safety for all commuters.
#TrafficManagement #RoadSafety #BengaluruTraffic #NammaBengaluru #PublicService
@seemantsingh96 @Jointcptraffic @DCPTrEastBCP @CMofKarnataka @PriyankKharge
ನಮ್ಮ ನಿರಂತರ ಸಿಟಿ ರೌಂಡ್ಸ್ ಭಾಗವಾಗಿ, ಜಂಟಿ ಪೊಲೀಸ್ ಆಯುಕ್ತರು (ಸಂಚಾರ) ಮತ್ತು ಸಂಚಾರ ವಿಭಾಗದ ಡಿಸಿಪಿ (ಪೂರ್ವ) ಅವರೊಂದಿಗೆ ಫ್ರೇಜರ್ ಟೌನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಸೀದಿ ವೃತ್ತಕ್ಕೆ (Mosque Circle) ಭೇಟಿ ನೀಡಿದೆವು. ಈ ಸಂದರ್ಭದಲ್ಲಿ ಪ್ರಸ್ತುತ ಇರುವ ಸಂಚಾರ ವ್ಯವಸ್ಥೆಯನ್ನು ಪರಿಶೀಲಿಸಿ, ಜಂಕ್ಷನ್ನಲ್ಲಿ ಎದುರಾಗುತ್ತಿರುವ ಕಾರ್ಯಾಚರಣೆಯ ಸವಾಲುಗಳನ್ನು ಮೌಲ್ಯಮಾಪನ ಮಾಡಿದೆವು. ಅಲ್ಲದೆ, ಸಂಚಾರ ನಿರ್ವಹಣೆಯನ್ನು ಸುಧಾರಿಸಲು, ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಎಲ್ಲಾ ಪ್ರಯಾಣಿಕರ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದೆವು.
Visited Mosque Circle Today, under the jurisdiction of Frazer Town Traffic Police Station, along with the Joint Commissioner of Police (Traffic) and DCP Traffic (East) as part of our ongoing city rounds. We reviewed the existing traffic conditions, assessed operational challenges at the junction, and discussed measures to improve traffic management, ease congestion, and enhance road safety for all commuters.
#TrafficManagement #RoadSafety #BengaluruTraffic #NammaBengaluru #PublicService
@seemantsingh96@Jointcptraffic@CMofKarnataka@PriyankKharge@DCPTrEastBCP
It was an honour to receive Hon’ble Home Minister Shri Priyank Kharge at the Traffic Management Centre, Bengaluru, along with DG & IGP Dr. M. A. Saleem, IPS, and JCP Traffic Shri Karthik Reddy, IPS and other senior officer
We reviewed Bengaluru’s technology-driven traffic management initiatives and held a focused brainstorming session on key traffic issues, decongestion, mobility and road safety.
#BengaluruTrafficPolice #TrafficManagementCentre #TrafficManagement #RoadSafety #NammaBengaluru
@seemantsingh96@PriyankKharge@DgpKarnataka@Jointcptraffic
ದಿನಾಂಕ:31/05/2026 ರಂದು ನಡೆಯಲಿರುವ ಟಾಟಾ ಐಪಿಎಲ್-2026ರ ಕ್ರಿಕೆಟ್ ಫೈನಲ್ಗೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಲುಪಿದ್ದು, ಫೈನಲ್ ಪಂದ್ಯವನ್ನು ಗಮನದಲ್ಲಿಟ್ಟುಕೊಂ���ು ಕೆಳಗಿನ ಸುರಕ್ಷಿತ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ.
• ಸಾರ್ವಜನಿಕರು ಫೈನಲ್ ಪಂದ್ಯದ ಫಲಿತಾಂಶ ಬಂದ ನಂತರ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆಗಳನ್ನು ಮಾಡುವಂತಿಲ್ಲ.
• ರಸ್ತೆಗಳಿಗೆ ಮುಖಮಾಡಿರುವ ಎಲ್ ಇಡಿ ವಾಲ್ಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೆ ಅಳವಡಿಸಬಾರದು ಹಾಗೂ ಈಗಾಗಲೇ ಅಳವಡಿಸಿರುವ ಎಲ್ ಇಡಿ ವಾಲ್ಗಳಲ್ಲಿ ಪಂದ್ಯವನ್ನು ಪ್ರಸಾರ ಮಾಡಬಾರದು.
• ಪಟಾಕಿ ಸಿಡಿಸಬಾರದು. ���ಪಾಯಕಾರಿ ವಸ್ತುಗಳನ್ನು ಬಳಸಬಾರದು.
• ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಶಾಂತಿ ಮತ್ತು ಶಿಸ್ತು ಕಾಪಾಡುವುದು.
• ಸಂಚಾರ ಪೊಲೀಸರ ನೀಡುವ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.
• ಬೈಕ್ ರ್ಯಾಲಿ, ಅತಿವೇಗ ಚಾಲನೆ, ಸ್ಪಂಟ್, ಹಾರ್ನ್ ದುರುಪಯೋಗ ಮತ್ತು ರಸ್ತೆ ತಡೆ ಮಾಡುವುದನ್ನು ನಿಷೇದಿಸಿದೆ.
• ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಅಶಾಂತಿ ಸೃಷ್ಟಿಸುವುದು, ಜಗಳವಾಡುವುದು ಅಥವಾ ಅಸಭ್ಯವಾಗಿ ವರ್ತಿಸಬಾರದೆಂದು ಸೂಚಿಸಿದೆ.
• ಸೋಶಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್, ದ್ವೇಷಪೂರಿತ ಸಂದೇಶ ಅಥವಾ ವದಂತಿಗಳನ್ನು ಹಂಚಬಾರದು.
• ಪಂದ್ಯ ಫಲಿತಾಂಶದ ಹೆಸರಿನಲ್ಲಿ ಇತರ ತಂಡದ ಅಭಿಮಾನಿಗಳನ್ನು ಪ್ರಚೋದಿಸುವುದು. ನಿಂದಿಸುವುದು ಅಥವಾ ಜಗಳಕ್ಕೆ ಕಾರಣವಾ��ುವಂತೆ ವರ್ತಿಸಬಾರದು.
• ಕಾನೂನು-ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ಮರೆಯಬಾರದು.
#Advisory #DcpNorthEast #JointCpEast #BengaluruCityPolice
@BlrCityPolice @DgpKarnataka @KarnatakaCops @CPBlr @jt_cpeastbcp
Delighted to participate in the valedictory ceremony of the Summer Camp 2026 organized for the children of officers and staff residing in the CAR quarters, Bengaluru City Police.
Over the last two weeks, the camp provided a vibrant platform for children to engage in sports, cultural activities, learning, and team-building beyond academics. Glad to distribute prizes to the young winners and witness their enthusiasm, talent, and confidence.
Appreciation to all officers, staff, organisers, and parents who contributed towards making this initiative meaningful and memorable for the children.
#BengaluruCityPolice #SummerCamp2026 #NammaPolice #CommunityEngagement #ChildrenFirst
ಸೇಫ್ ಕನೆಕ���ಟ್ — ಸಹಾಯ ಕೇವಲ ಒಂದು ಟ್ಯಾಪ್ ದೂರ
ತುರ್ತು ಪರಿಸ್ಥಿತಿಯಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯ.
KSP ಆಪ್ನ Safe Connect ವೈಶಿಷ್ಟ್ಯವು ನಾಗರಿಕರನ್ನು ಲೈವ್ ವೀಡಿಯೋ ಸ್ಟ್ರೀಮಿಂಗ್ ಮತ್ತು ಲೈವ್ ಲೊಕೇಶನ್ ಹಂಚಿಕೆಯ ಮೂಲಕ Safe City Command Centre ಜೊತೆ ತಕ್ಷಣ ಸಂಪರ್ಕಿಸಿ ವೇಗವಾದ ಸಹಾಯ ಪಡೆಯಲು ನೆರವಾಗುತ್ತದೆ.
🛡️ ವೈಶಿಷ್ಟ್ಯಗಳು
✔️ ಒಂದೇ ಟ್ಯಾಪ್ನಲ್ಲಿ ತುರ್ತು ವೀಡಿಯೋ ಕರೆ ಸಹಾಯ
✔️ ಪೊಲೀಸರೊಂದಿಗೆ ಲೈವ್ ಲೊಕೇಶನ್ ಹಂಚಿಕೆ
✔️ ವೇಗವಾದ ತುರ್ತು ಪ್ರತಿಕ್ರಿಯೆ ಸಮನ್ವಯ
✔️ ಸಮೀಪದ ಪೊಲೀಸ್ ಠಾಣೆಗಳ ತ್ವರಿತ ಪ್ರತಿಕ್ರಿಯೆ
✔️ ಘಟನೆಗಳು, ಅನುಮಾನಾಸ್ಪದ ವಾಹನಗಳು, ಸ್ಪ್ಯಾಮ್ ಹಾಗೂ ಕಳೆದುಹೋದ ವಸ್ತುಗಳ ವರದಿ
✔️ ನಾಗರಿಕರ ಸುರಕ್ಷತೆ ಮತ್ತು ತುರ್ತು ಸಹಾಯವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗ���ದೆ
⚠️ ಸೇಫ್ ಕನೆಕ್ಟ್ ಬಳಸಬೇಕಾದ ಸಂದರ್ಭಗಳು
❌ ತುರ್ತು ಅಥವಾ ಅಸುರಕ್ಷಿತ ಪರಿಸ್ಥಿತಿಗಳಲ್ಲಿ
❌ ಯಾರಾದರೂ ಹಿಂಬಾಲಿಸುತ್ತಿದ್ದಾರೆ ಅಥವಾ ಬೆದರಿಕೆ ಅನುಭವಿಸಿದಾಗ
❌ ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣ ವರದಿ ಮಾಡಲು
❌ ತಕ್ಷಣದ ಪೊಲೀಸ್ ಸಹಾಯ ಅಗತ್ಯವಿರುವಾಗ
📱 ಎಚ್ಚರಿಕೆಯಿಂದಿರಿ. ಸಂಪರ್ಕದಲ್ಲಿರಿ. ಸುರಕ್ಷಿತರಾಗಿರಿ.
#Awareness #DcpNorthEast #JointCpEast #BengaluruCityPolice
@BlrCityPolice @DgpKarnataka @KarnatakaCops @CPBlr @jt_cpeastbcp
ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ 112 ಎಮೆರ್ಜೆನ್ಸಿ ರೆಸ್ಪಾನ್ಸ್ (ERSS) ಬಹುಭಾಷೆಗಳಲ್ಲಿ ಸ್ಪಂದಿಸುವ ತಂತ್ರಜ್ಞಾನವನ್ನು ಬೆಂಗಳೂರು ನಗರ ಪೊಲೀಸರು ಅಳವಡಿಸಿಕೊಂಡಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಚಾಲನೆ ನೀಡಿದೆ.
ಯಾರಾದರೂ 112 ಗೆ ಕರೆ ಮಾಡಿದಾಗ, ಭಾಷಾ ಸಮಸ್ಯೆ ಇದ್ದಲ್ಲಿ, ಕರೆ ಸ್ವಯಂಚಾಲಿತವಾಗಿ ಕರೆ ಮಾಡುವವರಿಗೆ ಅನು��ೂಲಕರವಾದ ಭಾಷೆಗೆ ಅನುವಾದಗೊಳ್ಳುತ್ತದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಹತ್ತು ಭಾಷೆಗಳನ್ನು ಸಕ್ರಿಯಗೊಳಿಸಲಾಗಿದೆ.
112 ಎಮೆರ್ಜೆನ್ಸಿ ರೆಸ್ಪಾನ್ಸ್ ಆಯಾ ರಾಜ್ಯಗಳ ಭಾಷೆಗಳಿಗೆ ಸೀಮಿತವಾಗಿ ಸೇವೆ ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು, ಕನ್ನಡ ಭಾಷೆ ಸೇರಿದಂತೆ ವಿವಿಧ ರಾಜ್ಯಗಳ 7 ಭಾಷೆಗಳಿಗೆ ಮತ್ತು ಹೊರದೇಶಗಳ 3 ಭಾಷೆಗಳಿಗೆ ಸ್ಪಂದಿಸಲಿದೆ. 112ಗೆ ಕರೆ ಮಾಡುವ ನಾಗರಿಕರು, ಅವರು ಮಾತನಾಡುವ ಅನುಕೂಲಕರ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಯಾವುದೇ ರೀತಿಯ ತುರ್ತು ಕರೆಗಳಿಗೆ ತರ್ಜುಮೆ ಮಾಡಿ ನೆರವು ನೀಡಲಾಗುತ್ತದೆ.
ದೇಶದ ಯಾವುದೇ ಮಹಾನಗರಗಳಲ್ಲಿಯೂ 112 ಎಮರ್ಜೆನ್ಸಿ ರೆಸ್ಪಾನ್ಸ್ಗೆ ಈ ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿಲ್ಲ. ಪ್ರಥಮ ಬಾರಿಗೆ ಬೆಂಗಳೂರು ನಗರ ಪೊಲೀಸರು ಬಹುಭಾಷೆಗಳಲ್ಲಿ ನೆರವು ನೀಡುವ ವ್ಯವಸ್ಥೆ ಮಾಡಿದ್ದಾರೆ.
ಬೆಂಗಾಲಿ, ಗುಜುರಾತಿ, ಓಡಿಯಾ, ಮಣಿಪುರಿ, ಕಾಶ್ಮೀರಿ, ನೇಪಾಳಿ ಮತ್ತು ಅಸ್ಸಾಮಿ ಭಾಷೆಗಳಿಗೆ ಸ್ಪಂದಿಸುವ ವ್ಯವಸ್ಥೆ ಮಾಡಲಾಗಿದೆ.
ಪ್ರಪಂಚದ ಎಲ್ಲ ಕಡೆಯ ಜನರು ಬೆಂಗಳೂರಿಗೆ ಬರುತ್ತಿದ್ದಾರೆ. ಸಾಮಾನ್ಯವಾಗಿ ಹೊರದೇಶದಿಂದ ಬರುವವರು ಇಂಗ್ಲೀಷ್ ಭಾಷೆ ಹೊರತಾಗಿ ಬೇರೆ ಭಾಷೆಗಳಲ್ಲಿ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿದೇಶದಿಂದ, ಯಾವ ಭಾಷೆ ಹೆಚ್ಚು ಮಾತಾಡುವ ಜನರು ಬರುತ್ತಾರೆ ಎಂಬ ಬಗ್ಗೆ ಡೇಟಾ ಸಂಗ್ರಹಿಸಲ���ಗಿದೆ. ಇದರ ಆಧಾರದ ಮೇಲೆ ಸ್ಪ್ಯಾನೀಶ್, ಫ್ರೆಂಚ್, ಅರೇಬಿಕ್ ಭಾಷೆ ಮಾತಾಡುವ ವಿದೇಶಿಗರು ಹೆಚ್ಚಾಗಿ ಬೆಂಗಳೂರಿಗೆ ಬರುತ್ತಾರೆ ಎಂಬುದು ಕಂಡು ಬಂದಿದೆ.
ವಿದೇಶಿಗರಿಗೂ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ನಿಟ್ಟ��ನಲ್ಲಿ ಬಹುಭಾಷೆಗಳಿಗೆ ಸ್ಪಂದಿಸುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. 112 ERSS ಬಹುಭಾಷೆಗಳಲ್ಲಿ ಸ್ಪಂದಿಸುವ ವ್ಯವಸ್ಥೆ ಬಹಳ ಉಪಯುಕ್ತವಾಗಲಿದೆ.
ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್, ವಂಶಿಕೃಷ್ಣ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ ಹಾಗೂ ಎಲ್ಲ ವಿಭಾಗದ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
#karnataka #police #112ERSS @KarnatakaCops @DgpKarnataka @masaleemips @BlrCityPolice @CPBlr @112Karnataka @KarnatakaVarthe
It was a pleasure to visit Biocon and engage in a meaningful interaction with Kiran Mazumdar-Shaw and distinguished participants during the session. Encouraging discussions on responsible corporate engagement, innovation and collaborative approaches towards safer and stronger communities.
ಬಯೋಕಾನ್ಗೆ ಭೇಟಿ ನೀಡಿ ಅಲ್ಲಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಿರಣ್ ಮಜುಂದಾರ್-ಶಾ ಅವರೊಂದಿಗೆ ಮತ್ತು ಗಣ್ಯ ವ್ಯಕ್ತಿಗಳೊಂದಿಗೆ ಅರ್ಥಪೂರ್ಣ ಸಂವಾದ ನಡೆಸಿದ್ದು ಒಂದು ಸಂತೋಷದ ಅನುಭವವಾಗಿತ್ತು. ಜವಾಬ್ದಾರಿಯುತ ಕಾರ್ಪೊರೇಟ್ ತೊಡಗಿಸಿಕೊಳ್ಳುವಿಕೆ, ನವೀನತೆ ಹಾಗೂ ಸಹಕಾರಿ ವಿಧಾನಗಳ ಮೂಲಕ ಸುರಕ್ಷಿತ ಮತ್ತು ಬಲಿಷ್ಠ ಸಮುದಾಯಗಳ ನಿರ್ಮಾಣಕ್ಕೆ ಸಂಬಂಧಿಸಿದ ಉತ್ತೇಜನಕಾರಿ ಚರ್ಚೆಗಳು ನಡೆದವು.
#Biocon #SaferCommunities #CollaborativeGovernance #Bengaluru
ಹೆಚ್.ಎ.ಎಲ್ ಪೊಲೀಸ್ ಠಾಣೆಯ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ, ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ 7 ವರ್ಷಗಳ��ಂದ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ನನ್ನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ಸಿಸಿಬಿಯ ಸಂಘಟಿತ ಅಪರಾಧ ದಳ ವಶಕ್ಕೆ ಪಡೆದುಕೊಂಡಿದೆ.
ಈ ವೇಳೆ ಪರವಾನಗಿ ಇಲ್ಲದೇ ಇಟ್ಟುಕೊಂಡಿದ್ದ 2 ಪಿಸ್ತೂಲ್ಗಳು ಮತ್ತು 3 ಜೀವಂತ ಗುಂಡುಗಳನ್ನೂ ಜಪ್ತಿಪಡಿಸಿಕೊಳ್ಳಲಾಗಿದ್ದು, ಈತನಿಗೆ ಪಿಸ್ತೂಲ್ ಮಾರಾಟ ಮಾಡಿದ್ದ ಹೊರರಾಜ್ಯದ ರೌಡಿ ಶೀಟರ್ನನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.
ಸಿಸಿಬಿ ಉಪ ಪೊಲೀಸ್ ಆಯುಕ್ತರಾದ (ಅಪರಾಧ- 1) ಶ್ರೀ ಶ್��ೀಹರಿಬಾಬು ಬಿ.ಎಲ್. ನೇತೃತ್ವದಲ್ಲಿ, ಸಿಸಿಬಿಯ ಸಂಘಟಿತ ಅಪರಾಧ ದಳ (ಪೂರ್ವ) ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಸಿ.ಎಸ್.ಆನಂದ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ರವರುಗಳಾದ ಶ್ರೀ ಆರ್.ರಮೇಶ್, ಶ್ರೀ ಸುರೇಶ್ ಪಿ. ಹಾಗೂ ಇತರ ಅಧಿಕಾರಿ/ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
The Organized Crime Wing of the CCB has taken into custody a rowdy-sheeter who had been absconding for the past seven years after being involved in various cases registered at the HAL Police Station and failing to appear before the Hon’ble Court for trial. He was apprehended from an apartment located on Bannerghatta Road in Bengaluru.
During the operation, two pistols and three live rounds that were being possessed without a valid license were seized. Also arrested an interstate rowdy-sheeter who had allegedly sold the pistols to the accused.
The operation was carried out under the leadership of CCB DCP (Crime-1) Shri B. L. Sriharibabu, with the participation of ACP Shri C. S. Anand from the CCB Organized Crime Wing (East Division), along with Police Inspectors Shri R. Ramesh, Shri Suresh P., and other officers and staff.
@CPBlr @seemantsingh96 @DgpKarnataka @KarnatakaCops
ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಯೊಂದರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಜ್ಯ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಲಾಗಿದೆ. ದೂರುದಾರರ ಮನೆಯಲ್ಲಿ ಕೆಲಸಕ್ಕಿದ್ದ ಈ ಆರೋಪಿಯು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದನು. ತನಿಖೆಯ ಸಂದರ್ಭದಲ್ಲಿ ಪೊಲೀಸರು ಸುಮಾರು ₹25 ಲಕ್ಷ ಮೌಲ್ಯದ 172 ಗ್ರಾಂ ವಜ್ರ ಮತ್ತು ಚಿನ್ನದ ಆಭರಣಗಳನ್ನು ಹಾಗೂ ₹48,000 ನಗದನ್ನು ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ವಿಶೇಷ ಕಾರ್ಯಾಚರಣೆಯಲ್ಲಿ, ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು CEIR (Central Equipment Identity Register) ವ್ಯವಸ್ಥೆಯನ್ನು ಬಳಸಿಕೊಂಡು ಕಳುವಾಗಿದ್ದ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿದ್ದಾರೆ. ಈ ಕಾರ್ಯಾಚರಣೆಯ ಭಾಗವಾಗಿ ವಿವಿಧ ಕಂಪನಿಗಳ ಒಟ್ಟು 321 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಅಂದಾಜು ಮೌಲ್ಯ ₹49.30 ಲಕ್ಷಗಳಾಗಿದೆ. ಈ ಎಲ್ಲಾ ಮೊಬೈಲ್ಗಳನ್ನು ಅವುಗಳ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.
ಸಾರ್ವಜನಿಕರ��ಗೆ ಸಲಹೆ: ನಾಗರಿಕರು ಸದಾ ಜಾಗರೂಕರಾಗಿರಬೇಕು, ಮನೆಯ ಕೆಲಸದವರು ಮತ್ತು ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮುನ್ನ ಅವರ ಹಿನ್ನೆಲೆಯನ್ನು ಪರಿಶೀಲಿಸಬೇಕು. ಯಾವುದೇ ಸಂಶಯಾಸ್ಪದ ಚಟುವಟಿಕೆಗಳು ಅಥವಾ ಮೊಬೈಲ್ ಫೋನ್ ಕಳೆದುಹೋದ ಸಂದರ್ಭಗಳಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಿ.
Within the limits of the Koramangala Police Station, an interstate accused involved in a house theft case was successfully arrested. The accused, who was working at the complainant’s house, stole valuables and fled the scene. During the investigation, the police recovered 172 grams of diamond and gold jewellery and ₹48,000 cash, with a total value of approximately ₹25 lakhs.
In a special operation conducted by the South-East Division Police, stolen mobile phones were traced using the CEIR (Central Equipment Identity Register) system. As part of the operation, 321 stolen mobile phones of various brands were recovered, with an approximate total value of ₹49.30 lakhs, and were returned to their rightful owners.
Citizens are advised to remain vigilant, verify domestic workers and employees, and immediately report any suspicious activities or loss of mobile phones to the nearest police station.
@CPBlr
@seemantsingh96
@DgpKarnataka
@KarnatakaCops
#KoramangalaPolice #SouthEastDivision #BengaluruCityPolice #CrimePrevention #StayAlert #PublicSafety #SafeCommunity
ಮಹದೇವಪುರ, ಕೆ.ಜಿ. ಹಳ್ಳಿ ಮತ್ತು ಮಲ್ಲೇಶ್ವರಂ ಪೊಲೀಸ್ ಠಾಣೆಗಳ ವ್ಯಾಪ್ತಿಯೊಳಗೆ, ನಾಲ್ವರು ಆರೋಪಿಗಳನ್ನು (ಇವರಲ್ಲಿ ಮೂವರು ಅಂತರರಾಜ್ಯದವರು) ನಿಷೇಧಿತ ಮಾದಕ ದ್ರವ್ಯಗಳ ಮಾರಾಟಕ್ಕೆ ಸಂಬಂಧಿಸಿದಂತೆ ಯಶಸ್ವಿಯಾಗಿ ಬಂಧಿಸಲಾಗಿದೆ. ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ನಡೆಸಿದ ದಾಳಿಗಳಲ್ಲಿ ಪೊ��ೀಸರು 37 ಕೆ.ಜಿ. 400 ಗ್ರಾಂ ಗಾಂಜಾ, 33 ಗ್ರಾಂ ಹೈಡ್ರೋ ಗಾಂಜಾ ಮತ್ತು 23.19 ಗ್ರಾಂ ಎಂ.ಡಿ.ಎಂ.ಎ (MDMA) ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾದಕ ದ್ರವ್ಯಗಳ ಒಟ್ಟು ಮೌಲ್ಯ ₹24,12,000 ಇದ್ದು, ಅಂದಾಜು ಮಾರುಕಟ್ಟೆ ಮೌಲ್ಯ ₹48,24,000 ಆಗಿದೆ. ನಾಲ್ವರು ಆರೋಪಿಗಳನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ನಾಗರಿಕರು ಎಚ್ಚರಿಕೆಯಿಂದ ಇರಬೇಕು ಮತ್ತು ಅಕ್ರಮ ಮಾದಕ ದ್ರವ್ಯಗಳ ಮಾರಾಟ ಅಥವಾ ವಿತರಣೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಹೊಂದಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ತಕ್ಷಣ ವರದಿ ಮಾಡಬೇಕು – ಇದರಿಂದ ನಮ್ಮ ಸಮುದಾಯವನ್ನು ಸುರಕ್ಷಿತವಾಗಿಡಲು ಸಹಾಯವಾಗುತ್ತದೆ.
Within the limits of Mahadevapura, K.G. Halli, and Malleswaram Police Stations, four accused—including three inter-state persons—were arrested for selling banned narcotic substances. Following raids based on credible information, the police seized 37 kg 400 grams of Ganja, 33 grams of Hydro Ganja, and 23.19 grams of MDMA. The total value of the seized narcotics is ₹24,12,000, with an estimated market value of ₹48,24,000. All four accused have been produced before the court and remanded to judicial custody.
Citizens are encouraged to remain vigilant and report any information regarding the sale or distribution of illegal substances to the nearest police station to help keep our community safe.
@CPBlr
@seemantsingh96
@DgpKarnataka
@KarnatakaCops
#BengaluruCityPolice #NDPSCase #DrugFreeBengaluru #PublicSafety #CrimePrevention #StayAlert
ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ರಾತ್ರಿ ಸಮಯದಲ್ಲಿ ಮನೆ ಕಳ್ಳತನ ಮಾಡಿದ ಅಂತರರಾಜ್ಯ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಲಾಗಿದೆ. ಆರೋಪಿಯು ಲಾಕ್ ಮಾಡಲಾದ ಮನೆಗೆ ಒಡೆದು ಒಳನುಗ್ಗಿ ಚಿನ್ನದ ಆಭರಣಗಳನ್ನು ದೋಚಿದ್ದನು. ತನಿಖೆಯ ಸಂದರ್ಭದಲ್ಲಿ ಪೊಲೀಸರು ಸುಮಾರು 1 ಕೆ.ಜಿ. 833 ಗ್ರಾಂ ತೂಕದ (ಚಿನ್ನ ಮತ್ತು ವಜ್ರದ) ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ ಸುಮಾರು ₹3 ಕೋಟಿ ಇರುವ ಅಂದಾಜು ಮಾಡಲಾಗಿದೆ.
ನಾಗರಿಕರು ಎಚ್ಚರಿಕೆಯಿಂದ ಇರಬೇಕು, ಮನೆಗಳಿಗೆ ಸೂಕ್ತ ಭದ್ರತೆ ಮಾಡಿಟ್ಟುಕೊಳ್ಳುವುದು ಮತ್ತು ಯಾವುದೇ ಸಂಶಯಾಸ್ಪದ ಚಟುವಟಿಕೆಗಳನ್ನು ಕಂಡ ತಕ್ಷಣ ಹತ್ತಿರದ ಪೊ��ೀಸ್ ಠಾಣೆಗೆ ತಕ್ಷಣ ವರದಿ ಮಾಡಬೇಕು.
Within the limits of the Yelahanka Police Station, an interstate accused involved in a night house-breaking and theft case was successfully arrested. The accused had broken into a locked house and stolen gold jewellery. During the investigation, the police recovered 1 kg 833 grams of jewellery ( gold and diamonds), valued at approximately ₹3 crore.
Citizens are advised to remain cautious, ensure proper security for their homes, and immediately report any suspicious activities to the nearest police station.
@CPBlr
@seemantsingh96
@DgpKarnataka
@KarnatakaCops
#YelahankaPolice #BengaluruCityPolice #CrimePrevention #StayAlert #PublicSafety #SafeCommunity
ತುರ್ತು ಪರಿಸ್ಥಿತಿಯಲ್ಲಿ:
• ಹತ್ತಿರದಲ್ಲಿರುವ ಸೇಫ್ಟಿ ಐಲ್ಯಾಂಡ್ (Safety Island) ಗೆ ಹೋಗಿ.
• SOS ಬಟನ್ ಒತ್ತಿ ಪೊಲೀಸ್ ಕಮಾಂಡ್ ಸೆಂಟರ್ ಜೊತೆ ಸಂಪರ್ಕ ಸಾಧಿಸಿ.
• ನಿಮ್ಮ ತುರ್ತು ಪರಿಸ್ಥಿತಿಯನ್ನು ತಿಳಿಸಲು ಎರಡು ಮಾರ್ಗದ ಧ್ವನಿ ವ್ಯವಸ್ಥೆ (Two-way audio system) ಅನ್ನು ಬಳಸಿ.
• ಪೊಲೀಸರು ಬರುವವರೆಗೆ CCTV ಮೇಲ್ವಿಚಾರಣೆಯಲ್ಲಿರುವ ಸೇಫ್ಟಿ ಐಲ್ಯಾಂಡ್ ಬಳಿ ಉಳಿಯಿರಿ.
@BlrCityPolice@CPBlr@DgpKarnataka@KarnatakaCops@jt_cpeastbcp
The public with suggestions or complaints regarding traffic or law and order can directly engage with the Commissioner of Police, Bengaluru and Joint commissioner of police (Traffic) other senior officers during the Masika Janasamparka / Sanchara Divasa, which will be held on Saturday, 28th February, from AM to PM at ESIC Nursing College and Auditorium at Indiranagar , Bengaluru.
Join Us Live on our youtube channel
Click Below:
https://t.co/l4MoWuDLMC
@CPBlr@seemantsingh96@DgpKarnataka@KarnatakaCops
#ಗೋವಿಂದರಾಜನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣ���ಧಿಕಾರಿ & @ACPVijayanagar ರವರಿಂದ ಠಾಣಾ ಸರಹದ್ದಿನ ಬಗ್ಗೆ ಹೆಚ್ಚಿನ ವಿವರಣೆ ಪಡೆಯಲಾಯಿತು.
ಪ್ರಮುಖ ವಿಚಾರಗಳು, ಕಾನೂನು ಸುವ್ಯವಸ್ಥೆ, ಅಪರಾಧ ತಡೆಗೆ ಸೂಕ್ತ ನಿಗಾವಹಿಸುವಂತೆ & ಠಾಣಾ ರಿಜಿಸ್ಟರ್ ಗಳ ಸಮರ್ಪಕ ನಿರ್ವಹಣೆಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು @BlrCityPolice.
Highlights from today’s rehearsal parade. I was pleased to observe the discipline, coordination, and preparedness displayed by our personnel ahead of the Republic Day 2026 Full Dress Rehearsal.
#RepublicDay#RepublicDayRehearsals#NationFirst#ServiceWithPride