ರಾಮ ~ ಕೃಷ್ಣ ~ ವಾಲ್ಮೀಕಿ ~ ಶಂಕರ ~ @SriSamsthana ~ ಗೋವು ~ #ಗೋಸ್ವರ್ಗ ~ #ರಾಮಕಥೆ ~ #ರಾಮಪದ ~ #ಸಾಧನಾಪಂಚಕ ~ ವೇದ ~ ವೇದಾರ್ಥ ~ ವಿಜ್ಞಾನ ~ ಯೋಗ.
My life is filled with Joy & Happiness.
ಇನ್ನೆನಾದರೂ ಬೇಕಾ...!!!?
ಮಂಗಳವಾರ ರುಚಕಯೋಗ, ಬುಧವಾರ ಭದ್ರಯೋಗ ಮತ್ತು ಗುರುವಾರ ಹಂಸಯೋಗವನ್ನು @SriSamsthana ದವರ ಪಾಠದಲ್ಲಿ ಕೇಳಿದೆವು.
ಇದು ಹೀಗೇ ಮಾಡಬೇಕೆಂದು ಮಾಡಿದ್ದಲ್ಲ. ಅದಾಗೆ ಒದಗಿಬಂದದ್ದು.
ಅವರಿಗೂ ಹಾಗೇ ಆಗಿತ್ತಂತೆ. ನಮಗೂ ಹಾಗೆಯೇ ಒದಗಿಬಂದದ್ದು ವಿಶೇಷ
ಬಹಳ ಸಂತೋಷಕರ ಸಂಗತಿ. ಈ ತಲೆಮಾರಿನ ಶಂಕರ ಯತಿಗಳು ತಂತ್ರಜ್ಞಾನವನ್ನ ತಮ್ಮ ಜ್ಞಾನ ಪ್ರಸರಣಗಳಲ್ಲಿ ಅತ್ಯಂತ ಸಮರ್ಪಕವಾಗಿ ಬಳಸುತ್ತಾರೆ. @SriSamsthana ಕಂಪ್ಯೂಟರ್, ಎಲ್ ಇ ಡಿ ಫಲಕ, ಪ್ರೆಸೆಂಟೇಷನ್ ಮುಂತಾದವುಗಳನ್ನು ಅತ್ಯಂತ ಸಮರ್ಪಕವಾಗಿ ಬಳಸುತ್ತಾರೆ. ಅವರ ಸಾಲಿನಲ್ಲಿ ಈ ಹೊಸ ಯತಿಗಳು...
https://t.co/8Xds359QON
ಮುಕ್ತಿಗೆ ಸಂನ್ಯಾಸಾಶ್ರಮವೇ ಆಗಬೇಕೆ? ಕರ್ಮಯೋಗದಿಂದಲೇ ಮುಕ್ತಿ ಸಾಧನೆ ಸಾಧ್ಯವಿಲ್ಲವೇ? @SriSamsthana ದವರ ಸಂನ್ಯಾಸ ದೀಕ್ಷೆ ಅವರ ಎಷ್ಟನೇ ವಯಸ್ಸಿನಲ್ಲಿ? ಅದಕ್ಕೆ ಮಾನದಂಡಗಳೇನು? ಸಂನ್ಯಾಸಗಳಿಗೆ ವೇದಾಧ್ಯಯನ, ಅಧ್ಯಾಪನಗಳಿಲ್ಲವೇ? ಇತ್ಯಾದಿ ಇತ್ಯಾದಿ... ಸುಮಾರು ೧:೩೦ ಗಂಟೆಗಳ ಆಧ್ಯಾತ್ಮ ಸಂಭಾಷಣೆ
ಮಗುವಿನ ಪ್ರಶ್ನೆಗಳು -
ಮೊದಲ ಪ್ರಶ್ನೆ : ಈ "ನಾನು" ಅನ್ನೋದನ್ನು ಬಿಡುವುದು ಅಷ್ಟೊಂದು ಕಷ್ಟವೇ? ಇದು ಎಲ್ಲಿಂದ ಬಂದ ಪ್ರಶ್ನೆ ಗೊತ್ತಿಲ್ಲ.
ಮುಂದಿನ ಕೆಲವು ಪ್ರಶ್ನೆಗಳು - ಕರ್ಮಯೋಗವೆಂದರೇನು? ಜ್ಞಾನಯೋಗವೆಂದರೇನು? ಭಕ್ತಿಯೋಗವೆಂದರೇನು? ವ್ಯತ್ಯಾಸಗಳೇನು? ಒಂದು ಮುಗಿದು ಇನ್ನೊಂದರ ಪ್ರಾರಂಭ yaavaaga?
ತಿಳಿಯದೇ ಮಾಡಿದ ತಪ್ಪಿಗೆ ಕ್ಷಮೆ ಇದೆ.
ತಪ್ಪು ಎಂದು ತಿಳಿದಿದ್ದೂ ಮಾಡಿದ ತಪ್ಪಿಗೆ ಕ್ಷಮೆ ಇದೆ. ಯಾವಾಗ? ತಪ್ಪನ್ನ ತಿದ್ದಿಕೊಳ್ಳುವ ಅವಕಾಶ, ಮನಸ್ಸಿದ್ದು ತಿದ್ದಿಕೊಳ್ಳುವುದಾದರೆ ಮಾತ್ರ.
ತಪ್ಪು ಎಂದು ತಿಳಿದೂ ತಪ್ಪು ಮಾಡಿ, ತಿದ್ದಿಕೊಳ್ಳುವ ಅವಕಾಶ ಮತ್ತು ಮನಸ್ಸಿಲ್ಲದಿದ್ದರೆ ಕ್ಷಮೆ ಕೇಳಿದರೆ, ಕ್ಷಮೆ ಇಲ್ಲ.
@SriSamsthana#seekfromsri@SeekFromSri
ಮರಣಿಸಿದವರ ಶರೀರವನ್ನು ಬರಿಯ ನೆಲದ ಮೇಲಿಡುತ್ತಾರೆ. ಕಾರಣ ಭೂಮಿಗೆ ಪಾಪಗಳನ್ನು ಹೀರಿಕೊಳ್ಳುವ ಸ್ವಭಾವವಿದೆ. ಅತಿಥಿಗಳನ್ನು ಬರಿಯ ನೆಲದ ಮೇಲೆ ಕೂರಿಸುವುದಿಲ್ಲ. ಮತ್ತದೇ ಕಾರಣ. ಅಂದಮೇಲೆ ನಾವು ಪಾಪ ಕಳೆದುಕೊಳ್ಳಲು ಇದೇ ಮಾರ್ಗ ಬಳಸಬೇಕಲ್ಲವೇ? ಹಾಗೆ ಮಾಡಬೇಡ ಅನ್ನುತ್ತಾರೆ.
ಹೀಗಿದ್ದಾಗ ಅವರಿಗೆ ಗುರುಕೃಪೆ ಆಗಬೇಕೆಂಬುದು ಬಯಕೆ ಅಂತ.
ಗುರುಕೃಪೆ ಅನ್ನೋದು ದೊಡ್ಡದು. ಅದು ಹೀಗೆಲ್ಲಾ ಗಡಿಬಿಡಿಯಲ್ಲಿ ಆಗುವಂತದ್ದಲ್ಲ ಅಂತ ಅರ್ಥವಾಗುವುದೇ ದೊಡ್ಡದು ಅಂತ. ಎಲ್ಲಿಗೆ ಬಂದಿದೇವೆ ನಾವು? @SriSamsthana ದವರು ಸಮಾಜಕ್ಕೆ ಸಮಯ ಕೊಟ್ಟಂತೆ ಹಿಂದಿನ ಯಾವ ಗುರುಗಳೂ ಬಹುಷಃ ಸಮಯ ಕೊಟ್ಟಿರಲಿಕ್ಕಿಲ್ಲ. ಆದರೂ ದೂರು ಅಂತ.
@SriSamsthana ದವರು ನಮ್ಮನ್ನು ತೋರಿಸಿ ಮಗುವಿಗೆ "ನೀನೂ ಅವರ ತರಹ ಆಗಬೇಕು" ಅಂದರಂತೆ. ಮಗುವು ಸಂತೋಷಪಟ್ಟು ಬಂದು ನಮ್ಮ ಬಳಿ ಹೇಳಿತು.
ನಮಗೆ ಇದಕ್ಕಿಂತ ದೊಡ್ಡ ವಿಚಾರ ಬೇರೊಂದಿಲ್ಲ.
ಅಷ್ಟು ದೊಡ್ಡವರ ದೃಷ್ಟಿ ಬಿದ್ದಿದೆ ಅಂದರೆ ಈ ಜೀವದ ಗತಿಗೆ ಒಳ್ಳೆಯದಾಯಿತೆಂದೇ ಅರ್ಥ.