ಇವತ್ತಿಗೆ ಬಹಳ ಅಗತ್ಯ ಇದೆ. ನಮ್ಮಗೆ ಒಳ್ಳೆ ಪ್ರಾದೇಶಿಕ ಪಕ್ಷ ಸಿಗೋವರೆಗೂ ಕನ್ನಡಿಗರು ಉದ್ಯಮಿಗಳಾಗಿ ಇತರೇ ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳನ್ನ ಕೊಟ್ಟು ಕನ್ನಡಿಗರು ಒಂದು ಬಲಿಷ್ಟ ಸಮುದಾಯ ಆಗ್ಬೇಕು. ಒಳ್ಳೆ ಪ್ರಾದೇಶಿಕ ಪಕ್ಷ ಸಿಕ್ಕ ನಂತರ ಸರ್ಕಾರ ಮಟ್ಟದ ಬೆಂಬಲ ಪಡ್ಕೊಂಡು ಇನ್ನೂ ಹೆಚ್ಚಿನ ಬೆಳವಣಿಗೆ ಕಾಣಬೇಕು.
DCs will be held accountable for any question paper leak in the state's recruitment examinations : @DKShivakumar
Why not Ministers ??
https://t.co/RzKWB5fSDF
ಬಹುಕೋಟಿ ಚೆಸ್ಕಾಂ (CESC) ಹಗರಣ ಬಯಲಿಗೆ ಎಳೆದ KRS ಪಕ್ಷ.
ಮೈಸೂರಿನಲ್ಲಿ KRS ಪಕ್ಷದಿಂದ ದಾಖಲೆಗಳನ್ನು ಬಿಡುಗಡೆ ಮಾಡಲಾಯಿತು.
ಸಾರ್ವಜನಿಕರೇ, ನಿಮ್ಮ ಮನೆ ಕರೆಂಟ್ ಬಿಲ್ ಏರುತ್ತಿರುವುದರ ಅಸಲಿ ರಹಸ್ಯ ಏನು ಗೊತ್ತೇ?
ಪ್ರತಿ ತಿಂಗಳು ನಿಮ್ಮ ಮನೆಗೆ ಬರುವ ವಿದ್ಯುತ್ ಬಿಲ್ ನೋಡಿದಾಗ ಇಷ್ಟೊಂದು ಬಿಲ್ ಬಂದಿದೆಯಲ್ಲಾ? ಎಂದು ತಲೆ ಉಜ್ಜಿಕೊಳ್ಳುತ್ತಿದ್ದೀರಾ? ನಾವು ಅಷ್ಟೊಂದು ಕರೆಂಟ್ ಬಳಸಿಯೇ ಇಲ್ಲ, ಆದರೂ ಇಷ್ಟೊಂದು ಹಣ ಏಕೆ ಕಟ್ಟಬೇಕು? ಎಂದು ಸರ್ಕಾರದ ವಿರುದ್ಧ ಮನಸ್ಸಿನಲ್ಲೇ ಶಪಿಸುತ್ತಿದ್ದೀರಾ?
ನಿಮ್ಮ ಆಕ್ರೋಶ ನೂರಕ್ಕೆ ನೂರು ನ್ಯಾಯಸಮ್ಮತವಾಗಿದೆ. ಆದರೆ ಇಲ್ಲಿ ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕಾದ ಒಂದು ಕಹಿ ಸತ್ಯವಿದೆ. ನಿಮ್ಮ ಮನೆಗೆ ಬರುತ್ತಿರುವ ಬಿಲ್ ಹೆಚ್ಚಾಗುತ್ತಿರುವುದು ನೀವು ಹೆಚ್ಚು ವಿದ್ಯುತ್ ಬಳಸುತ್ತಿರುವುದಕ್ಕಲ್ಲ; ಬದಲಿಗೆ ಇಲಾಖೆಯ ಒಳಗಡೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿ ನಡೆಸುತ್ತಿರುವ ಕೋಟ್ಯಂತರ ರೂಪಾಯಿಗಳ ಲೂಟಿಯನ್ನು ತುಂಬಲು.
ಹೌದು, ಇತ್ತೀಚೆಗೆ ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ (ಚೆಸ್ಕಾಂ) ನಡೆದಿರುವ ಕೋಟ್ಯಂತರ ರೂಪಾಯಿಗಳ ಹಗರಣವನ್ನು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷವು ಅಧಿಕೃತ ದಾಖಲೆಗಳ ಸಮೇತ ಬಯಲಿಗೆಳೆದಿದೆ. ಈ ಹಗರಣಕ್ಕೂ, ನಿಮ್ಮ ಜೇಬಿನಿಂದ ಪೋಲಾಗುತ್ತಿರುವ ಹಣಕ್ಕೂ ನೇರ ಸಂಬಂಧವಿದೆ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಲೆಕ್ಕಾಚಾರ:
1. ಇ-ಟೆಂಡರ್ ಇಲ್ಲದ ಖರೀದಿ: ₹10ರ ವಸ್ತುವಿಗೆ ₹100 ಪಾವತಿ!
ನಿಯಮದ ಪ್ರಕಾರ ಇಲಾಖೆಗೆ ಯಾವುದೇ ಸಾಮಗ್ರಿಗಳನ್ನು (ವೈರ್, ಟ್ರಾನ್ಸ್ಫಾರ್ಮರ್, ಮೀಟರ್ ಇತ್ಯಾದಿ) ಖರೀದಿಸಬೇಕಾದರೂ ಮುಕ್ತ ಟೆಂಡರ್ ಕರೆಯಬೇಕು. ಯಾರು ಕಡಿಮೆ ದರಕ್ಕೆ ಗುಣಮಟ್ಟದ ವಸ್ತು ಕೊಡುತ್ತಾರೋ ಅವರಿಂದ ಖರೀದಿಸಬೇಕು. ಆದರೆ ಚೆಸ್ಕಾಂನಲ್ಲಿ ನಿಯಮಗಳನ್ನು ಗಾಳಿಗೆ ತೂರಿ, ತಮಗೆ ಬೇಕಾದ ಖಾಸಗಿ ಗುತ್ತಿಗೆದಾರರಿಗೆ ಇ-ಟೆಂಡರ್ ಇಲ್ಲದೆಯೇ ಕೋಟ್ಯಂತರ ರೂಪಾಯಿಗಳ ಖರೀದಿ ಆದೇಶ ನೀಡಲಾಗಿದೆ.
ಇದರ ನೇರ ಪರಿಣಾಮ: ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ವಸ್ತುವನ್ನು ಭ್ರಷ್ಟ ಅಧಿಕಾರಿಗಳು ಕಮಿಷನ್ ಆಸೆಗಾಗಿ ಮೂರು ಪಟ್ಟು ಹೆಚ್ಚಿನ ದರಕ್ಕೆ ಖರೀದಿಸುತ್ತಾರೆ. ಈ ರೀತಿ ಇಲಾಖೆಗೆ ಆಗುವ ನಷ್ಟವನ್ನು ಸರ್ಕಾರ ತುಂಬುವುದು ಎಲ್ಲಿಂದ? ಮತ್ತೆ ಅದೇ ಸಾರ್ವಜನಿಕರ ಮೇಲೆ "ವಿದ್ಯುತ್ ದರ ಏರಿಕೆ" ಅಥವಾ "ಇಂಧನ ಹೊಂದಾಣಿಕೆ ವೆಚ್ಚ" (Fuel Adjustment Charges) ಎಂಬ ಹೆಸರಿನಲ್ಲಿ ನಿಮ್ಮ ಬಿಲ್ ಮೇಲೆ ಹೇರಲಾಗುತ್ತದೆ!
2. ನಿಯಮಬಾಹಿರ ವರ್ಗಾವಣೆಗಳು- ಲಂಚದ ಹಣದ ವಸೂಲಾತಿ ಯಾರಿಂದ?
ಚೆಸ್ಕಾಂನಲ್ಲಿ ಕಾನೂನುಬಾಹಿರವಾಗಿ ಅಧಿಕಾರಿಗಳ ಆಡಳಿತಾತ್ಮಕ ವರ್ಗಾವಣೆಗಳ ದಂಧೆ ನಡೆದಿದೆ. ಒಂದು ಆಯಕಟ್ಟಿನ ಜಾಗಕ್ಕೆ ಬರಲು ಭ್ರಷ್ಟ ಅಧಿಕಾರಿಗಳು ಲಕ್ಷಾಂತರ, ಕೋಟ್ಯಂತರ ರೂಪಾಯಿ ಲಂಚ ನೀಡುತ್ತಾರೆ ಎಂಬುದು ಬಹಿರಂಗ ಸತ್ಯ.
ಇದರ ನೇರ ಪರಿಣಾಮ ಏನಾಗಿದೆ ಗೊತ್ತೇ?
ಲಂಚ ಕೊಟ್ಟು ಬಂದ ಅಧಿಕಾರಿ ಮೊದಲು ತಾನು ಹೂಡಿಕೆ ಮಾಡಿದ ಹಣವನ್ನು ವಸೂಲಿ ಮಾಡಲು ನೋಡುತ್ತಾನೆಯೇ ಹೊರತು ಜನರಿಗೆ ಪ್ರಾಮಾಣಿಕ ಸೇವೆ ನೀಡುವುದಿಲ್ಲ. ಗುತ್ತಿಗೆದಾರರಿಂದ ಕಮಿಷನ್ ಪಡೆಯುವುದು, ಕಳಪೆ ಕಾಮಗಾರಿಗಳಿಗೆ ಬಿಲ್ ಪಾಸ್ ಮಾಡುವುದು ಇವರ ಕೆಲಸವಾಗುತ್ತದೆ. ಅಂತಿಮವಾಗಿ ಇಲಾಖೆ ದಿವಾಳಿಯಾಗುತ್ತದೆ, ಆ ನಷ್ಟವನ್ನು ಭರಿಸಲು ನಿಮ್ಮ ಕರೆಂಟ್ ಬಿಲ್ ದರ ಹೆಚ್ಚಿಸಲಾಗುತ್ತದೆ.
3. ಕಳಪೆ ಕಾಮಗಾರಿ ಮತ್ತು ನಿಮ್ಮ ಸುಲಿಗೆ
ಭ್ರಷ್ಟಾಚಾರದ ಮಡುವಿನಲ್ಲಿ ನಡೆಯುವ ಕಾಮಗಾರಿಗಳು ಎಷ್ಟು ಕಳಪೆಯಾಗಿರುತ್ತವೆ ಎಂದರೆ, ಹಾಕಿದ ಕೆಲವೇ ದಿನಗಳಲ್ಲಿ ಟ್ರಾನ್ಸ್ಫಾರ್ಮರ್ ಸುಟ್ಟುಹೋಗುತ್ತವೆ ಅಥವಾ ಲೈನ್ಗಳು ದುರಸ್ತಿ ಬರುತ್ತವೆ.
ಇದರ ನೇರ ಪರಿಣಾಮ ಏನು ಗೊತ್ತೇ?
ಪದೇ ಪದೇ ದುರಸ್ತಿಗೆಂದು ಇಲಾಖೆಯ ಹಣ ಪೋಲಾಗುತ್ತದೆ. ಮತ್ತೊಂದೆಡೆ, ರೈತರ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಸಿಗುವುದಿಲ್ಲ, ಜನಸಾಮಾನ್ಯರಿಗೆ ಲೋಡ್ ಶೆಡ್ಡಿಂಗ್ ಕಾಟ ತಪ್ಪುವುದಿಲ್ಲ. ಅಂದರೆ ಹಣವನ್ನೂ ನಾವೇ ಹೆಚ್ಚಿಗೆ ಕೊಡಬೇಕು, ಕತ್ತಲಲ್ಲಿಯೂ ನಾವೇ ಕೂರಬೇಕು.
ಕೇಳಿ ಇಂಧನ ಸಚಿವರೇ, ಇದಕ್ಕೆ ಯಾರು ಜವಾಬ್ದಾರರು?
ಈ ಮಹಾಲೂಟಿಗೆ ಅಂದಿನ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಮತ್ತು ನಿಗಮದ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡ ಅವರು ನೇರ ಹೊಣೆ ಹೊರಬೇಕು. ಇಷ್ಟೆಲ್ಲಾ ಅಕ್ರಮಗಳು ಇಲಾಖೆಯ ಮೂಗಿನ ನೇರಕ್ಕೆ ನಡೆಯುತ್ತಿದ್ದರೂ ಇವರು ಮೌನವಾಗಿದ್ದೇಕೆ? ನಿಮ್ಮ ಮೂಗಿನ ಕೆಳಗೆ ಸಾರ್ವಜನಿಕರ ತೆರಿಗೆ ಹಣ ಲೂಟಿಯಾಗುತ್ತಿದ್ದರೆ ನೀವು ಕಣ್ಣು ಮುಚ್ಚಿ ಕುಳಿತಿದ್ದರಾ?
ಈಗಾಗಲೇ ಕೆಆರ್ಎಸ್ ಪಕ್ಷವು ಭ್ರಷ್ಟಾಚಾರದ ಜಾಲವನ್ನು ಬಿಚ್ಚಿಟ್ಟು 200 ಪುಟಗಳ ಅಧಿಕೃತ ದಾಖಲೆಗಳನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರಿಗೆ ಸಲ್ಲಿಸಿ, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ.
ಜನರೇ, ಈಗಲಾದರೂ ಎಚ್ಚೆತ್ತುಕೊಳ್ಳಿ.
ರಾಜಕಾರಣಿಗಳು ಮತ್ತು ಅಧಿಕಾರಿಗಳು ಒಳಗಡೆ ಕೋಟಿ ಕೋಟಿ ಲೂಟಿ ಮಾಡಿ ಎಸಿ ರೂಂನಲ್ಲಿ ಮಲಗುತ್ತಾರೆ. ಆದರೆ ಅದರ ಹೊರೆಯನ್ನು ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ, ಕೂಲಿ ಮಾಡಿ ಬದುಕುವ ನೀವು ಹೊರಬೇಕಾಗುತ್ತದೆ.
ನಿಮ್ಮ ಬಿಲ್ ಹೆಚ್ಚಾಗುತ್ತಿರುವುದು ಇಲಾಖೆಯ ಅಭಿವೃದ್ಧಿಗಾಗಿ ಅಲ್ಲ, ಭ್ರಷ್ಟರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲು! ಈ ವ್ಯವಸ್ಥಿತ ಲೂಟಿಯ ವಿರುದ್ಧ ನಾವು ಧ್ವನಿ ಎತ್ತದಿದ್ದರೆ, ಮುಂದಿನ ದಿನಗಳಲ್ಲಿ ಕರೆಂಟ್ ಬಿಲ್ ಕಟ್ಟುವುದು ಸಾಮಾನ್ಯ ಜನರಿಗೆ ಅಸಾಧ್ಯವಾಗುತ್ತದೆ.
ಭ್ರಷ್ಟಾಚಾರದ ವಿರುದ್ಧದ ಈ ಹೋರಾಟ ಕೇವಲ ಕೆಆರ್ಎಸ್ ಪಕ್ಷದ್ದಲ್ಲ, ಇದು ನಿಮ್ಮ ಜೇಬನ್ನು ಉಳಿಸಿಕೊಳ್ಳಲು ನೀವು ಮಾಡಬೇಕಾದ ಹೋರಾಟ. ಭ್ರಷ್ಟ ಅಧಿಕಾರಿಗಳಿಗೆ ಮತ್ತು ಅವರಿಗೆ ಬೆಂಬಲ ನೀಡುವ ರಾಜಕಾರಣಿಗಳಿಗೆ ತಕ್ಕ ಶಾಸ್ತಿಯಾಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ.
ಬನ್ನಿ, ಭ್ರಷ್ಟ ಮುಕ್ತ ಕರ್ನಾಟಕಕ್ಕಾಗಿ ಕೈಜೋಡಿಸಿ.
ರವಿಕುಮಾರ್ ಎಂ ನ್ಯಾಯವಾದಿ
ರಾಜ್ಯ ಸಂಘಟನಾ ಕಾರ್ಯದರ್ಶಿ
(KRS) ಪಕ್ಷ
ಸರ್ಕಾರದ ಒಂದು ಮೂಲಭೂತ ಕರ್ತವ್ಯವನ್ನೇ ಒಂದು ಖಾಸಗಿ ಕಂಪನಿಗೆ 30 ವರ್ಷಕ್ಕೆ ಅಡ ಇಡೋದು ಅಂದ್ರೆ ಇದು. ಕಳೆದ ವಾರ ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿರುವ 30 ವರ್ಷದ ಒಪ್ಪಂದ ಅಂದರೆ ಭವಿಷ್ಯದ ಸರ್ಕಾರಗಳ ಕೈ ಕಟ್ಟಿಹಾಕೋದು. ಜನರ ತೆರಿಗೆ ಹಣವನ್ನು ದಶಕಗಳ ಕಾಲ ಒಂದೇ ಕಂಪನಿಯ ಕೈಗೆ ಒಪ್ಪಿಸೋದು. ಈಗ 20 ವರ್ಷದ ಯುವಕರು 50 ವರ್ಷದವರಾಗೋವರೆಗೂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಾಡಿದ ತಪ್ಪಿಗೆ ಬೆಲೆ ಕಟ್ಟೋದು.
ಇದು ಕೇವಲ “ಕಸ ನಿರ್ವಹಣೆ” ಒಪ್ಪಂದ ಅಲ್ಲ. ಇದು ಬೆಂಗಳೂರಿನ ಸಾರ್ವಜನಿಕ ವ್ಯವಸ್ಥೆಯನ್ನೇ ಖಾಸಗೀಕರಣ ಮಾಡುವ ಹೆಬ್ಬಾಗಿಲು.
ಇವತ್ತು ಕಸ.
ನಾಳೆ ಕರೆಂಟು.
ನಾಡಿದ್ದು ನೀರು.
ಮತ್ತೆ ರಸ್ತೆ.
ಆಮೇಲೆ ಸರ್ಕಾರ ಅಂತ ಯಾಕೆ ಬೇಕು?
ಹಣಕಾಸು ಇಲಾಖೆ ಎಚ್ಚರಿಕೆ ಕೊಟ್ಟಿದ್ದರೂ ಹೈದರಾಬಾದ್ ಮೂಲದ ಒಂದೇ ಕಾಂಟ್ರಾಕ್ಟರ್ ಜೊತೆ ₹39,437 ಕೋಟಿ ಒಪ್ಪಂದ ಮಾಡಿರುವ ಉದ್ದೇಶ ಏನು? ಪ್ರತಿ ವರ್ಷ 5% ದರ ಏರಿಕೆ ಅಂದ್ರೆ ಕೊನೆಗೆ 430%!
ಅಂದಾಜಿಗಿಂತ ₹6,389 ಕೋಟಿ ಹೆಚ್ಚು ಕೋಟ್ ಮಾಡಿದ್ರೂ ಆ ಕಂಪೆನಿಗೆ ಟೆಂಡರ್ ಹಿಂದಿನ ಮರ್ಮ ಏನು? ಒಂದೇ ಕಂಪೆನಿಗೆ 6 ಝೋನ್ ಗಳ ಕಾಂಟ್ರಾಕ್ಟ್ ಕೊಟ್ಟರೆ monopoly ಆಗುತ್ತೆ ಅನ್ನೋ ಕನಿಷ್ಠ ಭಯವೂ ಬೇಡವೇ?
#Bengaluru
#GarbageDeal
#ನಮ್ಮನಾಡು_ನಮ್ಮಆಳ್ವಿಕೆ