Official twitter account of Vijayanagar Police Station (080-22942514)/9480801726/Dail-112 in case of emergency. | Help us to serve you better | @BlrCityPolice
ಸಾರ್ವಜನಿಕರ ಸುರಕ್ಷತೆ & ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿನ್ನೆ ತಡರಾತ್ರಿ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿ & ಸಿಬ್ಬಂದಿಗಳಿಂದ ರೌಡಿ ಶೀಟರ್ಗಳ ವ್ಯಾಪಕ ಪರಿಶೀಲನಾ ಕಾರ್ಯಾಚರಣೆ ನಡೆಸಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಯಿತು.
#ವಿಜಯನಗರ ಪೊಲೀಸ್ ಠಾಣೆ | ಮಹತ್ವದ ಪತ್ತೆ ಕಾರ್ಯ
🔹 2 ಕುಖ್ಯಾತ ಆರೋಪಿಗಳ ಬಂಧನ
🔹 8 ಪ್ರಕರಣಗಳ ಯಶಸ್ವಿ ಪತ್ತೆ
🔹 ₹23 ಲಕ್ಷ ಮೌಲ್ಯದ 155g ಚಿನ್ನ & ಸ್ಕೂಟರ್ ವಶ
👏 @VijayanagaraPS ಅಧಿಕಾರಿ & ಸಿಬ್ಬಂದಿಗಳ ತಂಡದ ಅತ್ಯುತ್ತಮ ಕಾರ್ಯಕ್ಕೆ @CPBlr ರವರು ಅಭಿನಂದಿಸಿದರು @BlrCityPolice.
@JointCPWest@DgpKarnataka
International Day Against Drug Abuse and Illicit Trafficking
@BlrCityPolice
ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ & ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
OTP ವಂಚನೆಗಳಿಂದ ಎಚ್ಚರಿಕೆ....
ವಂಚಕರು ಬ್ಯಾಂಕ್ ಅಧಿಕಾರಿಗಳು, ಗ್ರಾಹಕ ಸೇವಾ ಪ್ರತಿನಿಧಿಗಳು ಅಥವಾ ಸರ್ಕಾರಿ ಅಧಿಕಾರಿಗಳಂತೆ ನಟಿಸಿ ಕರೆ, ಸಂದೇಶ ಅಥವಾ ಇ-ಮೇಲ್ ಮೂಲಕ ಸಂಪರ್ಕಿಸಿ, ಖಾತೆ ಪರಿಶೀಲನೆ ಅಥವಾ ವಹಿವಾಟು ಪ್ರಕ್ರಿಯೆಗಾಗಿ ನಿಮ್ಮ OTP ಅನ್ನು ಕೇಳಬಹುದು.
🔹 ನಿಮ್ಮ OTP, PIN, ಪಾಸ್ವರ್ಡ್ ಅಥವಾ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
🔹 ಬ್ಯಾಂಕುಗಳು ಮತ್ತು ಸರ್ಕಾರಿ ಸಂಸ್ಥೆಗಳು ಕರೆ ಅಥವಾ ಸಂದೇಶಗಳ ಮೂಲಕ OTP ಕೇಳುವುದಿಲ್ಲ.
🔹 ಸೈಬರ್ ವಂಚನೆ ನಡೆದರೆ ತಕ್ಷಣ 1930 ಗೆ ಕರೆ ಮಾಡಿ ದೂರು ನೀಡಿ.
ಎಚ್ಚರಿಕೆಯಿಂದಿರಿ • ಸುರಕ್ಷಿತವಾಗಿರಿ
#Awareness #DcpNorthEast #JointCpEast #BengaluruCityPolice
@BlrCityPolice@CPBlr@DgpKarnataka@jt_cpeastbcp
ಸಾರ್ವಜನಿಕರ ಸುರಕ್ಷತೆ & ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿನ್ನೆ ತಡರಾತ್ರಿ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿ & ಸಿಬ್ಬಂದಿಗಳಿಂದ ರೌಡಿ ಶೀಟರ್ಗಳ ವ್ಯಾಪಕ ಪರಿಶೀಲನಾ ಕಾರ್ಯಾಚರಣೆ ನಡೆಸಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಯಿತು.
ಪಶ್ಚಿಮ ವಿಭಾಗದ ಪೊಲೀಸ್ ಸಿಬ್ಬಂದಿಯ ದೈಹಿಕ ಸದೃಢತೆ, ಮಾನಸಿಕ ಆರೋಗ್ಯ & ಒತ್ತಡ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಯೋಗ ಶಿಬಿರವನ್ನು ಆಯೋಜಿಸಲಾಗಿತ್ತು.
ಅಧಿಕಾರಿ & ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿ ವಿವಿಧ ಯೋಗಾಸನಗಳು & ಪ್ರಾಣಾಯಾಮ ಅಭ್ಯಾಸ ಮಾಡಿದರು @BlrCityPolice.
ಈ ದಿನ ಪೀಕ್ ಅವರ್ ನಲ್ಲಿ @wftrps ಮತ್ತು @halairporttrfps ಠಾಣಾ ವ್ಯಾಪ್ತಿಯ ವಿಬ್ ಗಯಾರ್ ಜಂಕ್ಷನ್ ಹಾಗೂ ಮಾರತ್ತಹಳ್ಳಿ ಬ್ರಿಡ್ಜ್ ಜಂಕ್ಷನ್ ಗೆ ಠಾಣಾಧಿಕಾರಿಯವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ವಾಹನಗಳ ಸುಗಮ ಸಂಚಾರ ಸಂಬಂಧ ಕೈಗೊಂಡಿರುವ ಮತ್ತು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಿ, ವಾಹನ ದಟ್ಟಣೆ ಉಂಟಾಗದಂತೆ ಸೂಕ್ತ ಕ್ರಮ ವಹಿಸಲು ಸೂಚಿಸಲಾಯಿತು.
ಈ ದಿನ @wftrps ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 19.06.2026 ರಂದು ವೈಟ್ ಫೀಲ್ಡ್ ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ (01) ದ್ವಿಚಕ್ರ ವಾಹನ ಸವಾರ ಮತ್ತು ಒಂದು (01) ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
#RideResponsibly #BetterSafeThanSorry #DriveResponsibly
As per the directions of the Hon'ble Commissioner of Police, Bengaluru City, Rani Chennamma Squad of the NorthEast Division was formally inaugurated.
On this occasion, the officers and personnel of the Rani Chennamma Squad were briefed on their roles and responsibilities relating to women's safety, prevention of crimes against women, public outreach and coordination, rapid response during emergencies, and the protection of women and children. They were also advised to actively conduct awareness programmes to promote self-defence skills among women and to discharge their duties with dedication, professionalism, and effectiveness.
Further, an Action Demo was conducted for the officers and staff of the NorthEast Division Office on emergency response procedures concerning women's safety and various self-defence techniques.
The demonstration covered practical methods of personal safety, escaping from threatening situations, seeking immediate assistance, and providing protection and support to victims during emergencies.
The programme was aimed at strengthening the preparedness, confidence, and operational capabilities of the personnel in handling emergency situations effectively and ensuring better safety and security for women.
Police officers and staff participated in the programme.
ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಆದೇಶದ ಮೇರೆಗೆ ಈಶಾನ್ಯ ವಿಭಾಗದ ರಾಣಿ ಚೆನ್ನಮ್ಮ ಪಡೆಗೆ ಅಧಿಕೃತ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಹಿಳೆಯರ ಸುರಕ್ಷತೆ, ಮಹಿಳೆಯರ ವಿರುದ್ಧದ ಅಪರಾಧಗಳ ತಡೆ, ಸಾರ್ವಜನಿಕರೊಂದಿಗೆ ಸಮನ್ವಯ, ತುರ್ತು ಸಂದರ್ಭಗಳಲ್ಲಿ ಕ್ಷಿಪ್ರ ಸ್ಪಂದನೆ ಹಾಗೂ ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕರ್ತವ್ಯಗಳ ಕುರಿತು ಅಗತ್ಯ ಮಾರ್ಗದರ್ಶನ ನೀಡಲಾಯಿತು. ಜೊತೆಗೆ ಮಹಿಳೆಯರ ಆತ್ಮರಕ್ಷಣಾ ಕೌಶಲ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಸೂಚಿಸಿ, ಪಡೆಗೆ ವಹಿಸಲಾದ ಜವಾಬ್ದಾರಿಗಳನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ತಿಳಿಸಲಾಯಿತು.
ಇದೇ ವೇಳೆ ಈಶಾನ್ಯ ವಿಭಾಗದ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ತುರ್ತು ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗೂ ಆತ್ಮರಕ್ಷಣಾ ತಂತ್ರಗಳ (Self-Defence Techniques) ಕುರಿತು ಪ್ರಾತ್ಯಕ್ಷಿಕೆ (Action Demo) ನೀಡಲಾಯಿತು. ಅಪಾಯದ ಸಂದರ್ಭಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ವಿಧಾನಗಳು, ದಾಳಿಯಿಂದ ತಪ್ಪಿಸಿಕೊಳ್ಳುವ ತಂತ್ರಗಳು, ತುರ್ತು ಸಹಾಯ ಪಡೆಯುವ ಕ್ರಮಗಳು ಹಾಗೂ ಸಂತ್ರಸ್ತರಿಗೆ ಸುರಕ್ಷತೆ ಒದಗಿಸುವ ವಿಧಾನಗಳ ಬಗ್ಗೆ ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು.
ಈ ತರಬೇತಿಯು ಸಿಬ್ಬಂದಿಯ ಕಾರ್ಯಕ್ಷಮತೆ ಮತ್ತು ತುರ್ತು ಸಂದರ್ಭಗಳನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಿತ್ತು.
ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
#DcpNorthEast #JointCpEast #BengaluruCityPolice
@CPBlr@BlrCityPolice@DgpKarnataka@jt_cpeastbcp
#OpenHouseProgram
ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ಶಾಲಾ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಕಾರ್ಯವೈಖರಿ ಕುರಿತು ಮಾಹಿತಿ ಪಡೆದರು @BlrCityPolice.
ಪೊಲೀಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳು ಕಾನೂನು, ಸುರಕ್ಷತೆ ಮತ್ತು ಪೊಲೀಸ್ ಸೇವೆಗಳ ಬಗ್ಗೆ ನೇರ ಅನುಭವವನ್ನು ಪಡೆದರು.
ಈ ದಿನ ವಿಜಯನಗರ ಪೊಲೀಸ್ ಠಾಣಾ ವತಿಯಿಂದ ಆರ್.ಪಿ.ಸಿ ಲೇಔಟ್ ಬೀಟ್ ಸದಸ್ಯರೊಡನೆ ಸಭೆಯನ್ನು ನಡೆಸಿ ನಮ್ಮ 112, 1930,ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ ಹಾಗು ಕಾನೂನು ಬಗ್ಗೆ ಅರಿವು ಮೂಡಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಹಿತು.
#AreaDomination
ಸಾರ್ವಜನಿಕರಲ್ಲಿ ಸುರಕ್ಷತೆ ಭಾವನೆ ಮೂಡಿಸಿ, ಸಮಾಜಘಾತುಕ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಗಸ್ತು ಕಾರ್ಯಾಚರಣೆಯಲ್ಲಿ ಅನುಮಾನಸ್ಪದ ವ್ಯಕ್ತಿಗಳ & ವಾಹನಗಳ ತಪಾಸಣೆ ಕಾರ್ಯವನ್ನು ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿರಂತರವಾಗಿ ಮುಂದುವರೆಸಲಾಗುತ್ತಿದೆ.
ಸುರಕ್ಷಿತ ರಸ್ತೆಗಳು. ಸಶಕ್ತ ಮಹಿಳೆಯರು.
ಸುರಕ್ಷತೆ ಎಂಬುದು ಕೇವಲ ಸೌಲಭ್ಯವಲ್ಲ. ಅದು ಪ್ರತಿಯೊಬ್ಬರ ಹಕ್ಕು.
ಪ್ರತಿಯೊಬ್ಬ ಮಹಿಳೆಯೂ ಯಾವುದೇ ಭಯವಿಲ್ಲದೆ, ಆತ್ಮವಿಶ್ವಾಸ ಮತ್ತು ನಿರಾಳತೆಯಿಂದ ನಗರದಲ್ಲಿ ಓಡಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಬೆಂಗಳೂರಿನಾದ್ಯಂತ 'ಸುರಕ್ಷತಾ ದ್ವೀಪಗಳನ್ನು' (Safety Islands) ಸ್ಥಾಪಿಸಲಾಗಿದ್ದು, ನಿಮಗೆ ಅಗತ್ಯವಿದ್ದಾಗ ಸಹಾಯವು ಯಾವಾಗಲೂ ಸಮೀಪದಲ್ಲೇ ಇರುತ್ತದೆ.
ತುರ್ತು ಸಂದರ್ಭದಲ್ಲಿ ತ್ವರಿತ ಸಹಾಯಕ್ಕಾಗಿ ಕೆ.ಎಸ್.ಪಿ (KSP) ಆಪ್ನ 'SOS' ವೈಶಿಷ್ಟ್ಯವನ್ನು ಬಳಸಿ.
ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112 ಗೆ ಕರೆ ಮಾಡಿ.
ಏಕೆಂದರೆ, ಪ್ರತಿಯೊಬ್ಬ ಮಹಿಳೆಯೂ ಸುರಕ್ಷಿತವಾಗಿ, ಸಶಕ್ತವಾಗಿ ಮತ್ತು ರಕ್ಷಿಸಲ್ಪಟ್ಟಿದ್ದೇವೆ ಎಂದು ಭಾವಿಸಿದಾಗ ಮಾತ್ರ ಆ ನಗರವು ನಿಜಕ್ಕೂ ಸುರಕ್ಷಿತ ನಗರವಾಗುತ್ತದೆ.
Safe Streets. Strong Women.
Safety is not a privilege. It’s a right.
Every woman deserves the freedom to move through the city with confidence and peace of mind. With Safety Islands set up across Bengaluru, support is always nearby when you need it most.
Use the KSP App’s SOS feature for quick assistance.
In any emergency, call 112.
Because a safer city is one where every woman feels secure, empowered, and protected.
#SafetyIslands #KSPApp #Dial112 #SafeBengaluru #NammaBengaluru
@CPBlr@seemantsingh96@DgpKarnataka@KarnatakaCops
ಮೊಬೈಲ್ ಫೋನ್ ಗಳನ್ನು CEIR (Central Equipment Identity Register) ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ @GRNagarPS ಪೊಲೀಸರು! 📱👮
ನಿಮ್ಮ ಮೊಬೈಲ್ ಕಳೆದುಹೋದರೆ, ತಕ್ಷಣ ಈ ಕ್ರಮಗಳನ್ನು ಅನುಸರಿಸಿ:
1️⃣KSP ಆಪ್ ಮೂಲಕ ದೂರು ನೀಡಿ.
2️⃣https://t.co/3D4EeHzU0q ನಲ್ಲಿ ವಿವರಗಳನ್ನು ದಾಖಲಿಸಿ.