ಹೀಗೊಂದು ಗಣತಿ ಆಗಬೇಕಿದೆ.... ಏನಂತೀರಿ?
ಗಣತಿ ಮಾಡಬೇಕಾಗಿರುವುದು …
ಪ್ರಾಮಾಣಿಕ ಬಡ ವಿದ್ಯಾರ್ಥಿಗಳ ಸ್ಪರ್ಧಾರ್ಥಿಗಳ ಭವಿಷ್ಯದ ಕನಸುಗಳ ಗಣತಿ!
👉ಅತಿ ವೇಗದಲ್ಲಿ ಎಲ್ಲವೂ ಬದಲಾಗುತ್ತಿರುವ ಈ ಕಾಲಮಾನದಲ್ಲಿ ನಮಗೆ ಬೇಕಾಗಿರುವುದು ನಿಮ್ಮ ಈ ವೋಟ್ ಬ್ಯಾಂಕ್ ಓಲೈಸುವ ಗಣತಿ ಅಲ್ಲ......👈
👉ಕೆ.ಪಿ.ಎಸ್ಸಿ ಯಲ್ಲಿ ಎಷ್ಟು ಪ್ರಾಮಾಣಿಕ ಮತ್ತು ಎಷ್ಟು ಕಳಂಕಿತ ಅಧಿಕಾರಿಗಳು ಇದ್ದಾರೆ ಎಂಬುದರ ಗಣತಿ .👈
👉ಕೆ.ಪಿ.ಎಸ್ಸಿ ಯಿಂದ ಎಷ್ಟು ನೇಮಕಾತಿಗಳು ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂಬುದರ ಗಣತಿ..... ನೇಮಕಾತಿಯಲ್ಲಿ ಎಷ್ಟು ಹಗರಣಗಳು ಆಗಿವೆ?
ತಪ್ಪಿತಸ್ಥರಿಗೆ ಆಗಿರುವ ಶಿಕ್ಷೆಯ ಗಣತಿ.... ಇನ್ನೂ ಯಾಕೇ ಹಗರಣಗಳು ಮುಂದುವರೆದಿವೆ? ಎಂಬುದರ ಗಣತಿ 👈
👉ಕೆ.ಪಿ.ಎಸ್ಸಿ ಯಿಂದ ಎಷ್ಟು ಬಡ ಗ್ರಾಮೀಣ ಕನ್ನಡ ಅಭ್ಯರ್ಥಿಗಳು ನೇಮಕಾತಿ ಆಗಿದ್ದಾರೆ ಎಂಬ ಗಣತಿ 👈
👉 ಬೆಂಗಳೂರಿನ ವಿಜಯನಗರ, ಹಂಪಿನಗರ , ಚಂದ್ರ ಲೇಔಟ್, ಧಾರವಾಡ, ವಿಜಯಪುರ ಗಳಲ್ಲಿ ಹೊಟ್ಟೆ ಅರ್ಧಂಬರ್ಧ ಇಟ್ಟುಕೊಂಡು ಹಗಲು ರಾತ್ರಿ ಕಷ್ಟ ಪಟ್ಟು ಪ್ರಾಮಾಣಿಕರಾಗಿ ಓದುತ್ತಿರುವವರ ತಂದೆ ತಾಯಿ ಅವರ ಕನಸುಗಳ ಗಣತಿ 👈
👉 ನನ್ನ ಮಗ / ಮಗಳು ಕುಟುಂಬದ ಬಡತನದಿಂದ ನಮ್ಮನ್ನು ಪಾರು ಮಾಡುತ್ತಾನೆ
ಅವರ ನಂಬಿಕೆಗಳಿಗೆ ಸರ್ಕಾರದ ಕಾರ್ಯವೈಖರಿ ಹಾಗೂ ಕೈಗೊಂಡಿರುವ ಯೋಜನೆಗಳ ಗಣತಿ 👈
👉 ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಆಗಲು ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಗಣತಿ 👈
👉ಸೋ ಕಾಲ್ಡ್ ತಜ್ಞರು ತಜ್ಞರಾಗಲು ಅರ್ಹತೆ ಇದೆಯೇ ಎಂಬುದರ ಗಣತಿ 👈
👉ಸರ್ಕಾರಿ ಅಧಿಕಾರಿಗಳು ಶಾಸಕರು, ಸಂಸದರು,ಮಂತ್ರಿ ಮಹೋದಯರ ಸಂಬಂಧಿಗಳು ಎಷ್ಟು ಜನ ಸರ್ಕಾರಿ ಹುದ್ದೆಗಳಲ್ಲಿ ಇದ್ದಾರೆ ಎಂಬುದರ ಗಣತಿ .👈
👉ಅವರು ಸಮಾಜಕ್ಕೆ ಎಷ್ಟು ಸೇವೆ ಮಾಡಿದ್ದಾರೆ ಅನ್ನೋದರ ಗಣತಿ ಬೇಕು.👈
👉ಅಧಿಕಾರಿಗಳು ಭ್ರಷ್ಟಾಚಾರ ಮಾಡಿ ಕೊಳ್ಳೆ ಹೊಡೆದ ಹಣದ ಗಣತಿ...👈
👉ಎಷ್ಟು ಅಧಿಕಾರಿಗಳು ಕಳಂಕಿತ ಇದ್ದಾರೆ ಎಂಬುದರ ಗಣತಿ.... ಅವರು ಕೊಳ್ಳೆ ಹೊಡೆದಿರುವ ಆಸ್ತಿಯ ಗಣತಿ 👈
👉ಪ್ರತಿ ಸರ್ಕಾರಿ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ಗಣತಿ..👈
👉ಪ್ರತಿ ವರ್ಷ ಎಷ್ಟು ಹುದ್ದೆಗಳು KTTP ಟೆಂಡರ್ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಆಗುತ್ತಿವೆ ಅನ್ನೋದರ ಗಣತಿ.....👈
👉ಸರ್ಕಾರಿ ಇಲಾಖೆಗಳಲ್ಲಿ ಎಷ್ಟು ಜನರು ಹೊರಗುತ್ತಿಗೆ, ಒಳಗುತ್ತಿಗೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದರ ಗಣತಿ.. ಇದರಲ್ಲಿ ಎಷ್ಟು ಜನ ಹಿಂಬಾಗಿಲಿನಿಂದ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಆಗಿ ಖಾಯಂ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದರ ಗಣತಿ.....👈
👉Degree , Engineering ಮುಗಿಸಿ ಕೆಲಸ ಇಲ್ಲದೆ ಇರೋ ನಿರುದ್ಯೋಗಿ ಯುವಕರ ಗಣತಿ ಆಗಬೇಕಿದೆ....ಅವರಿಗೆ ಹೊಸ ಹೊಸ skills ಅಂದ್ರೆ Skill Development, Entrepreneurship, Start-up Ecosystem ಕಲಿಸಿ ದುಡಿಮೆಯ ದಾರಿ ತೋರಿಸುವ ಬಗ್ಗೆ ಗಣತಿ ಆಗಬೇಕಿದೆ. 👈
👉ಕಳೆದ 15-20 ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಗಣತಿ...
ಕೃಷಿಕರ ಬದುಕನ್ನು ಹೇಗೆ Technolgy ಬಳಸಿ ಬದಲಾವಣೆ ಮಾಡಬಹುದು ಅನ್ನೋದರ ಗಣತಿ. 👈
👉ಪ್ರತಿ ವರ್ಷ ಮುಚ್ಚುತ್ತಿರುವ ಸರ್ಕಾರಿ ಕನ್ನಡ ಶಾಲೆಗಳ ಗಣತಿ👈
ಯಾಕೆ ಮುಚ್ಚುತ್ತಿವೆ ಅನ್ನುವುದರ ಗಣತಿ
ಹೇಗೆ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಮುಂದಿನ ಭವಿಷ್ಯ ರೂಪಿಸಿಕೊಳ್ಳಬಹುದು ಅನ್ನೋದರ ಗಣತಿ👈
👉 ಶಿಕ್ಷಣ ಎಂಬ ಹೆಸರಲ್ಲಿ ಹೊಸ ಹೊಸ ಯೋಜನೆ ಜಾರಿಗೆ ತಂದು , ಅದರಲ್ಲಿ ಸಿಕ್ಕ ಸಿಕ್ಕವರು ಕೊಳ್ಳೆ ಹೊಡೆದ ದುಡ್ಡಿನ ಗಣತಿ.👈
👉 ಶಿಕ್ಷಣ ಫಲಿತಾಂಶದಲ್ಲಿ ಕುಸಿತ ಯಾಕೆ ಎಂಬ ಅಂಶಗಳನ್ನು ಗಮನಿಸಿ ಫಲಿತಾಂಶ ಹೆಚ್ಚಾಗಲು ಆಗಬೇಕಾಗಿದೆ ಗಣತಿ👈
👉 ಸಾಕ್ಷರತಾ ಪ್ರಮಾಣ ಹೆಚ್ಚಾಗಲು ಡ್ರಾಪ್ ಔಟ್ ಸಂಖ್ಯೆ ಹೋಗಿಸಲು ಆಗಬೇಕಾಗಿದೆ ಗಣತಿ 👈
👉ಮಳೆ, ಬರ, ಕುಡಿಯುವ ನೀರಿನ ತೀವ್ರತೆ- ಇದನೆಲ್ಲ ಹೇಗೆ ವೈಜ್ಞಾನಿಕ ರೀತಿಯಲ್ಲಿ ಪರಿಹರಿಸಬಹುದು ಎಂಬುದರ ಗಣತಿ ಬೇಕು…ನೈಸರ್ಗಿಕ ಅನಾಹುತಗಳ ವಿರುದ್ಧ ನಾವೆಷ್ಟು ತಯಾರಾಗಿದ್ದೀವಿ ಅನ್ನೋದರ ಲೆಕ್ಕ ಬೇಕು.👈
👉ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹೊಸ ಹೊಸ ಉದ್ಯಮ ಸ್ಥಾಪನೆ ಮಾಡುವ ಕುರಿತು ಗಣತಿ ಆಗಬೇಕಾಗಿದೆ 👈
👉ಕರ್ನಾಟಕದ ಮಕ್ಕಳಿಗೆ Digital Literacy, AI ಹೇಗೆ ಕಲಿಸಬಹುದು ಅನ್ನೋದರ ಗಣತಿ ಆಗಬೇಕಿದೆ..👈
👉ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ personal finance, ಹಣ, ದುಡಿಮೆಯ ಮಹತ್ವ ಅರಿವು ಮೂಡಿಸಲು ಬೇಕಾದ ಕಾರ್ಯಕ್ರಮಗಳ ಬಗ್ಗೆ ಗಣತಿ ಆಗಬೇಕಿದೆ..👈
👉AI,Machine Learning,Data Science ಬಳಸಿಕೊಂಡು ನಾವು ಹೇಗೆ ಮುಂದುವರೆಯ ಬಹುದು ಅನ್ನೋದರ ಗಣತಿ.👈
KPCL ನೇಮಕಾತಿ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ ಮಾರ್ಚ್ 3–4 ರೊಳಗೆ 622 ಅಭ್ಯರ್ಥಿಗಳಿಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ ಎಂದು ಭರವಸೆ.
ವಿಳಂಬವಾದರೆ ಮಾರ್ಚ್ 5ರಂದು ಬೆಂಗಳೂರು Freedom Park ನಲ್ಲಿ ಪ್ರತಿಭಟನೆ.@KJGeorgeOffice@siddaramaiah@Gaurav_Gupta67