ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಪರವಾನಗಿ ಭೂಮಾಪಕರ ಐತಿಹಾಸಿಕ ಧರಣಿ ಮುಂದುವರಿದಿದೆ. ಖಾಯಂ ನೇಮಕಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆಗಾಗಿ ಸಾವಿರಾರು ಭೂಮಾಪಕರು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದಾರೆ. ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಲಿ.
ಒಬ್ಬ ರೈತ — ಜಮೀನು ಪೋಡಿ ಬೇಕು. ಮಗಳ ಮದುವೆಗೆ ಸಾಲ ಬೇಕು. ಹಕ್ಕುಪತ್ರ ಬೇಕು.
ಯಾರ ಬಳಿ ಬರುತ್ತಾನೆ?
ಪರವಾನಗಿ ಭೂಮಾಪಕನ ಬಳಿ.
ರಾಜ್ಯದ ಲಕ್ಷಾಂತರ ರೈತರ ಭೂ ಸಮಸ್ಯೆಗಳಿಗೆ ನಾವೇ ಮೊದಲ ಸಂಪರ್ಕ.
ರೈತರಿಗೆ ಸೇವೆ ಸಲ್ಲಿಸುವ ನಮ್ಮ ಬದುಕು ಸುರಕ್ಷಿತವಾಗಬೇಡವೇ?
@siddaramaiah@krishnabgowda#JusticeForLicensedSurveyors
ಒಬ್ಬ ಪರವಾನಗಿ ಭೂಮಾಪಕ ಸೇವೆಯಲ್ಲಿರುವಾಗ ತೀರಿಕೊಂಡರೆ —
ಪಿಂಚಣಿ ಇಲ್ಲ.
ಗ್ರಾಚುಯಿಟಿ ಇಲ್ಲ.
ವಿಮೆ ಇಲ್ಲ.
ಪರಿಹಾರ ಇಲ್ಲ.
20+ ವರ್ಷ ಸರ್ಕಾರಿ ಕೆಲಸ ಮಾಡಿ, ಕುಟುಂಬಕ್ಕೆ ಉಳಿಸಿಹೋಗುವುದು ಶೂನ್ಯ.
ಇದಕ್ಕಿಂತ ದೊಡ್ಡ ಅನ್ಯಾಯ ಏನಿದೆ?
@siddaramaiah@krishnabgowda#JusticeForLicensedSurveyors
1999: ರಾಜ್ಯದಲ್ಲಿ 3 ಲಕ್ಷ ಪೋಡಿ ಪ್ರಕರಣ ಬಾಕಿ. ಸರ್ಕಾರಕ್ಕೆ ಪರಿಹಾರ ಬೇಕಿತ್ತು.
ಆಗ ಹುಟ್ಟಿತು — ಪರವಾನಗಿ ಭೂಮಾಪಕ ವ್ಯವಸ್ಥೆ (KLR Act 14/1999).
ನಾವು ಸಮಸ್ಯೆ ಬಗೆಹರಿಸಿದೆವು. 27 ವರ್ಷ ಸೇವೆ ಸಲ್ಲಿಸಿದೆವು.
ಈಗ ಸರ್ಕಾರ ನಮ್ಮನ್ನು ಮರೆತಿದೆಯೇ?
@siddaramaiah@krishnabgowda#JusticeForLicensedSurveyors
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಅವರೇ ಪ.ಭೂಮಾಪಕರಿಗೆ ಖಾಯಮಾತಿ ಮಾಡುತ್ತೆವೇ ಅಂತ ಕೊಟ್ಟಿರುವ ಅಭಿಪ್ರಾಯ ಸುಳ್ಳಾ…? ಬರಿ ಆಶ್ವಾಸನೆ ಅಷ್ಟೇನಾ , ನಮ್ಮ ಕಷ್ಟಗಳಿಗೆ ಸ್ಪಂದಿಸಿ ..
ಇದು ಸಾವಿರಾರು ಕುಟುಂಬಗಳ ಮನದಾಳದ ಮಾತುಗಳು 🙏
@tv9kannada I @AsianetNewsSN@krishnabgowda@siddaramaiah
ಪ ಭೂಮಾಪಕರ🎁 ಎರಡು ಪ್ರಮುಖ ನ್ಯಾಯಸಮ್ಮತ ಬೇಡಿಕೆಗಳಾದ:
(1) ಒಂದು ಬಾರಿಯ ವಿಶೇಷ ನೇಮಕಾತಿ
(2) ಸಮಾನ ಕೆಲಸಕ್ಕೆ ಸಮಾನ ವೇತನ
ಸಂಬಂಧಿಸಿದಂತೆ,
ಈ ಹೋರಾಟವು ಯಾವುದೇ ವ್ಯಕ್ತಿಗಳ ವಿರುದ್ಧವಲ್ಲ; ಇದು ನಮ್ಮ ವೃತ್ತಿ ಗೌರವ, ಬದುಕಿನ ಭದ್ರತೆ ಮತ್ತು ನ್ಯಾಯಕ್ಕಾಗಿ ಹೋರಾಟ
@tv9kannada I @AsianetNewsSN@krishnabgowda@siddaramaiah