ತೋಟಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ
ಎಎಚ್ಒ ನೇಮಕ: ವೃತ್ತಿಪರ ಪದವಿ ಅರ್ಹತೆಗೆ ಆಗ್ರಹ
: ತೋಟಗಾರಿಕಾ ಇಲಾಖೆಯಲ್ಲಿ ವೃತ್ತಿಪರ ಪದವಿ ಅರ್ಹತೆಗಳನ್ನು ಪರಿಗಣಿಸಬೇಕು ತೋಟಗಾರಿಕಾ ಹೊಸ ನೇರ ಸಹಾಯಕ ಮತ್ತು ಸಹಾಯಕರಿಗೆ ನೇಮಕಾತಿಯಲ್ಲಿ ತೋಟಗಾರಿಕೆ ಅಧಿಕಾರಿ (ಎಎಚ್ಒ)ಗಳಾಗಿ ಬಡ್ತಿ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಮಂಗಳವಾರ ದಂದು ಶಿರಸಿ, ಬೆಂಗಳೂರು, ಬಾಗಲಕೋಟೆ, ಮೂಡಿಗೆರೆ ಅರಭಾವಿ ಮತ್ತು ಇತರೆ ಕಾಲೇಜುಗಳಲ್ಲಿ ಬೃಹತ್ ಪ್ರತಿಭಟನೆ ನೆಡಿಸಿದರು.
ತೋಟಗಾರಿಕೆ ಸಹಾಯಕರನ್ನು (HA) ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಸ್ಥಾನಗಳಿಗೆ ಮುಂಬಡ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಕೆಲವು ಮಧ್ಯವರ್ತಿಗಳು ಸುಮಾರು 6-7 ಕೋಟಿ ಹಣ ಪಡೆದು ಮಾನ್ಯ ತೋಟಗಾರಿಕೆ ಸಚಿವರಿಂದ ಅನುಮೋದನೆಗೆ ಪ್ರಯತ್ನಿಸಲಾಗಿದೆ ಎನ್ನುವ ವದಂತಿ ಅಲೆದಾಡುತ್ತಿದೆ.
'ರಾಜ್ಯದಲ್ಲಿ 11 ತೋಟಗಾರಿಕೆ ಕಾಲೇಜುಗಳಿದ್ದು, 4 ವರ್ಷಗಳ ವೃತ್ತಿಪರ ಪದವಿ ಕಾರ್ಯಕ್ರಮದ ಮೂಲಕ ತರಬೇತಿ ನೀಡುತ್ತಿವೆ.
ಎಎಚ್ಒ ಹುದ್ದೆಯು ತೋಟಗಾರಿಕೆಯಲ್ಲಿ ವೃತ್ತಿಪರ ಪದವಿ ಮೂಲಕ ಮಾತ್ರ ಪಡೆಯಬಹುದಾದ ವಿಶೇಷ ಜ್ಞಾನ ಮತ್ತು ತರಬೇತಿ ಬಯಸುತ್ತದೆ. ಈ ಅರ್ಹತೆಗಳನ್ನು ಕಡೆಗಣಿಸುವುದರಿಂದ ಈ ಪದವಿಯ ಪ್ರಾಮುಖ್ಯತೆ ಕಡಿಮೆ ಆಗುತ್ತದೆ' ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿಗಳು ಹೇಳಿದರು.
ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆಗೆ 2018ರಲ್ಲಿ ಕೊನೆಯ ಹೀಗಾಗಿ, ತೋಟಗಾರಿಕೆ ಇಲಾಖೆಯ ಬಾರಿಗೆ ನೇಮಕಾತಿ ಮಾಡಲಾಗಿತ್ತು. ವಿವಿಧ ಹುದ್ದೆಗಳಿಗೆ ಹೊಸ ನೇಮಕಾತಿ ಆ ನಂತರ 6,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ.
ಹೀಗಾಗಿ, ತೋಟಗಾರಿಕೆ ಇಲಾಖೆಯ ವಿವಿಧ ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆ ಮಾಡಬೇಕೆಂದು ಆಗ್ರಹಿಸಿದರು.
'ತೋಟಗಾರಿಕೆ ಸಹಾಯಕರನ್ನು ಎಎಚ್ಒಗಳಾಗಿ ಬಡ್ತಿ ನೀಡಲು ಈಗಾಗಲೇ ಶೇ.10ರ ಮೀಸಲಾತಿ ಲಭ್ಯವಿದೆ. ಪ್ರತಿ ವರ್ಷ 900ಕ್ಕೂ ಹೆಚ್ಚು ವೃತ್ತಿಪರವಾಗಿ ಅರ್ಹ ತೋಟಗಾರಿಕೆ ಪದವೀಧರರು ಉದ್ಯೋಗ ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ ತರಬೇತಿ ಪಡೆದ ವೃತ್ತಿಪರರ ಸಾಕಷ್ಟು ಸಮೂಹವಿದ್ದು, ಬಡ್ತಿಗಾಗಿ ಈ ಪದವೀಧರರನ್ನು ನಿರ್ಲಕ್ಷಿಸಬಾರದು' ಎಂದರು.
'ತೋಟಗಾರಿಕೆ ವಲಯಕ್ಕೆ ಅಗತ್ಯ ಅರ್ಹತೆಗಳಿಲ್ಲದೆ ವ್ಯಕ್ತಿಗಳನ್ನು ನೇಮಿಸಿಕೊಳ್ಳುವುದರಿಂದ ಕ್ಷೇತ್ರದ ಬೆಳವಣಿಗೆ ದುರ್ಬಲಗೊಳಿಸುವ ಅಪಾಯವಿದೆ. ಎಎಚ್ಒ ಹುದ್ದೆಗೆ ವೃತ್ತಿಪರ ಅರ್ಹತೆಗಳನ್ನು ನೇಮಕಾತಿಯ
ನಿಯಮ 32ರ ಅಡಿಯಲ್ಲಿ ಬಡ್ತಿಗಳನ್ನು ಸ್ಥಗಿತಗೊಳಿಸಬೇಕು. ಕೇಡರ್ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಎಎಚ್ ಒ ನೇರ ನೇಮಕಾತಿ ಮತ್ತು ತೋಟಗಾರಿಕಾ ಸಹಾಯಕರ ಬಡ್ತಿ ನೇಮಕಾತಿಯ 90:10 ಅನುಪಾತವನ್ನು ಕ್ರಮವಾಗಿ ಮುಂದುವರಿಸಲು ಸರ್ಕಾರ ಶಿಫಾರಸ್ಸು ಮಾಡಬೇಕು' ಎಂದು ಆಗ್ರಹಿಸಿ ಕಾಲೇಜಿನ ಡೀನ್ ಅವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
@SS_Mallikarjun_@DrPrabhaSSM@CMofKarnataka
(@AKSSAofficial ) @secretarykpsc@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
Students are facing a huge problem in paying the fees as the ssp scholarship is delayed. Institutions are adding penalty each day for those who failed to pay the fees. Where as some students have dropped their studies.
Who is responsible for this ?
@Rahul_Hemmady@CMofKarnataka